ಸದನದಲ್ಲಿ ಮೇಜಿನ ಮೇಲೆ ಕೃತಕ ಕಾಲಿರಿಸಿ ಬಿಜೆಪಿ ಸಂಸದ ಭಾಷಣ!

KannadaprabhaNewsNetwork |  
Published : Feb 03, 2026, 02:00 AM IST
Sadananda Master

ಸಾರಾಂಶ

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ವೇಳೆ ಬಿಜೆಪಿ ಸಂಸದ ಸದಾನಂದನ್‌ ಮಾಸ್ಟರ್‌ ಅವರು ತಮ್ಮ ಕೃತಕ ಕಾಲು ಮೇಜಿನ ಮೇಲೆ ಇರಿಸಿ ಭಾಷಣ ಮಾಡಿದ ಪ್ರಸಂಗ ಸೋಮವಾರ ನಡೆದಿದೆ.

ನವದೆಹಲಿ: ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ವೇಳೆ ಬಿಜೆಪಿ ಸಂಸದ ಸದಾನಂದನ್‌ ಮಾಸ್ಟರ್‌ ಅವರು ತಮ್ಮ ಕೃತಕ ಕಾಲು ಮೇಜಿನ ಮೇಲೆ ಇರಿಸಿ ಭಾಷಣ ಮಾಡಿದ ಪ್ರಸಂಗ ಸೋಮವಾರ ನಡೆದಿದೆ.

ಕೃತಕ ಕಾಲುಗಳನ್ನು ಮೇಜಿನ ಮೇಲೆ ಇರಿಸಿ ಭಾಷಣ

ರಾಜ್ಯಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡುವ ವೇಳೆ ಮಾಸ್ಟರ್‌ ಅವರು ತಮ್ಮ ಕೃತಕ ಕಾಲುಗಳನ್ನು ಮೇಜಿನ ಮೇಲೆ ಇರಿಸಿ, ‘ಪ್ರಜಾಪ್ರಭುತ್ವ ಎಂದು ಗರ್ಜಿಸುತ್ತಿರುವವರು 31 ವರ್ಷಗಳ ಹಿಂದೆ ನನ್ನ ಮೇಲೊಂದು ದಾಳಿ ಮಾಡಿದ್ದರು. ನಾನು ಮನೆಗೆ ಮರಳುವ ವೇಳೆ ಕೊಲೆಗಡುಕರು ಹಿಂದಿನಿಂದ ಬಂದು ನನ್ನನ್ನು ಹಿಡಿದು, ರಸ್ತೆಯಲ್ಲಿ ಮಲಗಿಸಿ,‘ಇನ್ಕಿಲಾಬ್‌ ಜಿಂದಾಬಾದ್‌’ ಎನ್ನುತ್ತಾ ನನ್ನ ಕಾಲುಗಳನ್ನೇ ಕಡಿದರು’ ಎಂದು ಹೇಳಿದರು.

ಸದನದ ಶಿಸ್ತಿನ ಉಲ್ಲಂಘನೆ’ ಎಂದು ಆಕ್ಷೇಪ

ಈ ವೇಳೆ ಸಿಪಿಎಂನ ಜಾನ್‌ ಬ್ರಿಟಾಸ್‌ ಎದ್ದುನಿಂತು ‘ಇದು ಸದನದ ಶಿಸ್ತಿನ ಉಲ್ಲಂಘನೆ’ ಎಂದು ಆಕ್ಷೇಪವೆತ್ತಿದರು.

ಜಾನ್‌ ಅವರಿಗೆ ತಿರುಗೇಟು ನೀಡಿದ ಸದಾನಂದನ್‌ ಮಾಸ್ಟರ್‌, ‘ನಾನು ದೇಶ ಮತ್ತು ಜನರ ಎದುರು ಪ್ರಜಾಪ್ರಭುತ್ವ ಎಂದರೇನು ಎಂಬುದನ್ನು ತೋರಿಸಬಯಸುತ್ತೇನೆ. ಮಾನವೀಯತೆ, ಸಹನೆ ಮತ್ತು ಪ್ರಜಾಸತ್ತಾತ್ಮಕತೆ ಬಗ್ಗೆ ನೀವೆಲ್ಲಾ ಮಾತನಾಡುತ್ತೀರಿ, ಆದರೆ ನಿಮ್ಮ ನಡೆಯು ರಾಜಕೀಯ ಹಿಂಸೆಯ ಹಿಂದಿದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ’ ಎಂದು ಉತ್ತರಿಸಿದರು. ಬಳಿಕ ಮೇಜಿನ ಮೇಲಿರಿಸಿದ್ದ ತಮ್ಮ ಕಾಲುಗಳನ್ನು ಹಿಂತೆಗೆದುಕೊಂಡರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಡ್ರಗ್ಸ್‌ ನೀಡಿ 50 ಮಹಿಳೆಯರ ರೇಪ್‌ ಮಾಡಿದ್ದ ಜ್ಯೋತಿಷಿ ಸೆರೆ!
ಸಮರ ಬಿಸಿ: ಪ್ರೀಮಿಯಂ ಪೆಟ್ರೋಲ್‌ ₹2.35 ಏರಿಕೆ