ತೋಳಿಗೆ ಗುಂಡು ತಾಕಿದರೂ 30 ಕಿ.ಮಿ. ಬಸ್ಸು ಚಲಾಯಿಸಿ 35 ಜನರನ್ನು ರಕ್ಷಿಸಿದ ಧೀರ!

KannadaprabhaNewsNetwork |  
Published : Mar 13, 2024, 02:11 AM IST
ಬಸ್‌ ಚಾಲಕ | Kannada Prabha

ಸಾರಾಂಶ

ಬಸ್‌ ಚಾಲಕನಿಗೆ ದರೋಡೆಕೋರರು ಗುಂಡು ಹಾರಿಸಿದರೂ ಆತ ಎದೆಗುಂದದೆ 30 ಕಿ.ಮೀ ಚಲಿಸಿ ಪೊಲೀಸ್‌ ಠಾಣೆಗೆ ಕೊಂಡೊಯ್ದು ನಿಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ನಾಗಪುರ: ಚಾಲಕರು ತನ್ನ ಕರ್ತವ್ಯವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ. ಮಹಾರಾಷ್ಟ್ರದ ಅಮರಾವತಿಯಿಂದ ನಾಗಪುರಕ್ಕೆ ತೆರಳುತ್ತಿದ್ದ ಬಸ್ಸಿನ ಮೇಲೆ ದರೋಡೆಕೋರರು ಚಾಲಕನ ಮೇಲೆ ಗುಂಡು ಹಾರಿಸಿದರೂ, ಚಾಲಕ ಇದರಿಂದ ಕಂಗೆಡದೆ 30 ಕಿಲೋಮೀಟರ್‌ ಬಸ್ಸನ್ನು ಚಲಿಸಿ ಪೊಲೀಸ್‌ ಠಾಣೆಯಲ್ಲಿ ಸುರಕ್ಷಿತವಾಗಿ ತಂದಿರಿಸಿದ ರೋಚಕ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಭಾನುವಾರ 35 ಜನ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಮೇಲೆ ಕಾರಿನಲ್ಲಿ ಬಂದ ದರೋಡೆಕೋರರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಈ ಗುಂಡುಗಳನ್ನು ತಪ್ಪಿಸಲು ಹೋಗಿ ಚಾಲಕನ ಕೈ ಯಿಗೆ ಒಂದು ಗುಂಡು ತಾಕಿತು. ಇದರಿಂದ ಧೃತಿಗೆಡದೆ, 30 ಕಿ.ಮಿ. ಚಲಾಯಿಸಿ ಠಾಣೆಗೆ ಕರೆತಂದಿದ್ದಾರೆ. ಬಳಿಕ ಚಾಲಕನ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೊಲ್ಲಿ ಯುದ್ಧದಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಭಾರಿ ವ್ಯತಯ : ಗ್ಯಾಸ್‌ ಬರದಿದ್ದರೆ ಹೋಟೆಲ್‌ ಬಂದ್‌
ಲೆಬನಾನ್‌ ಮನೆ ಮೇಲೆ ಇಸ್ರೇಲ್‌ ಅಪಾಯಕಾರಿ ಬಿಳಿ ರಂಜಕ ಪ್ರಯೋಗ