ಭಾರತ ವಿರೋಧಿ ಕೃತ್ಯಕ್ಕೆ ಖಲಿಸ್ತಾನಿಗಳಿಂದ ತನ್ನ ನೆಲೆ ಬಳಕೆ : ಒಪ್ಪಿದ ಕೆನಡಾ

KannadaprabhaNewsNetwork |  
Published : Jun 19, 2025, 11:48 PM ISTUpdated : Jun 20, 2025, 05:30 AM IST
ಕೆನಡಾ | Kannada Prabha

ಸಾರಾಂಶ

ಖಲಿಸ್ತಾನಿಗಳ ವಿಚಾರದಲ್ಲಿ ಭಾರತದ ವಿರುದ್ಧ ರಾಜತಾಂತ್ರಿಕ ಸಮರಕ್ಕೆ ಇಳಿದಿದ್ದ ಕೆನಡಾ ಇದೇ ಮೊದಲ ಬಾರಿಗೆ ತನ್ನ ನೆಲದಲ್ಲಿ ಖಲಿಸ್ತಾನಿಗಳು ಭಾರತವನ್ನು ಗುರಿಯಾಗಿಸಿಕೊಂಡು ಷಡ್ಯಂತ್ರವನ್ನು ರೂಪಿಸುತ್ತಿದ್ದಾರೆ ಎಂದು ಒಪ್ಪಿಕೊಂಡಿದೆ.

 ಒಟ್ಟಾವಾ: ಖಲಿಸ್ತಾನಿಗಳ ವಿಚಾರದಲ್ಲಿ ಭಾರತದ ವಿರುದ್ಧ ರಾಜತಾಂತ್ರಿಕ ಸಮರಕ್ಕೆ ಇಳಿದಿದ್ದ ಕೆನಡಾ ಇದೇ ಮೊದಲ ಬಾರಿಗೆ ತನ್ನ ನೆಲದಲ್ಲಿ ಖಲಿಸ್ತಾನಿಗಳು ಭಾರತವನ್ನು ಗುರಿಯಾಗಿಸಿಕೊಂಡು ಷಡ್ಯಂತ್ರವನ್ನು ರೂಪಿಸುತ್ತಿದ್ದಾರೆ ಎಂದು ಒಪ್ಪಿಕೊಂಡಿದೆ. ಕೆನಡಾದ ಕೆನಡಿಯನ್ ಸೆಕ್ಯೂರಿಟಿ ಇಂಟಲಿಜೆನ್ಸ್ ಸರ್ವೀಸ್‌ ( ಸಿಎಸ್‌ಐಎಸ್‌) ಭಾರತದ ವಿರುದ್ಧ ಖಲಿಸ್ತಾನಿಗಳ ಕುತಂತ್ರವನ್ನು ಕೊನೆಗೂ ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ. 

ಏಜೆನ್ಸಿಯ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಕೆನಡಾದೊಳಗೆ ವಿದೇಶಿ ಹಸ್ತಕ್ಷೇಪ, ಉಗ್ರಗಾಮಿ ಚಟುವಟಿಕೆಯ ಬಗ್ಗೆ ಕಳವಳಕಾರಿ ಅಂಶಗಳು ಬಯಲು ಮಾಡಿದ್ದು, ‘ ಖಲಿಸ್ತಾನಿ ಉಗ್ರಗಾಮಿಗಳು ಭಾರತದಲ್ಲಿ ಹಿಂಸಾಚಾರ ಬಿತ್ತರಿಸಲು, ನಿಧಿ ಸಂಗ್ರಹಣೆಯಂತಹ ಯೋಜನೆಗಳಿಗೆ ಕೆನಡಾವನ್ನುನೆಲೆಯಾಗಿ ಬಳಸುತ್ತಿದೆ’ ಎಂದಿದೆ. ಈ ಮೂಲಕ ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ಸುರಕ್ಷಿತ ತಾಣ ಎನ್ನುವುದು ಬಹಿರಂಗವಾಗಿದೆ.. ಇನ್ನು ಕೆನಡಾ ಖಲಿಸ್ತಾನಿಗಳ ವಿರುದ್ಧ ಉಗ್ರವಾದ ಎಂಬ ಪದವನ್ನು ಅಧಿಕೃತವಾಗಿ ಬಳಸಿದ್ದು, ಇದೇ ಮೊದಲು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ