ಭಾರತದ ದಾಳಿಗೆ ಬಲಿಯಾದವರು ತ್ಯಾಗಿಗಳು ದೇವ್‌ಬಂದ್‌ ಫತ್ವಾ!

KannadaprabhaNewsNetwork |  
Published : Feb 23, 2024, 01:46 AM IST
ದೇವ್‌ಬಂದ್‌ | Kannada Prabha

ಸಾರಾಂಶ

ಭಾರತ ಕುರಿತಂತೆ ದಾರುಲ್‌ ಉಲೂಂ ವಿವಾದಿತ ಫತ್ವಾ ಹೊರಡಿಸಿದ್ದು, ಮದರಸಾ ವಿರುದ್ಧ ಕೇಸ್‌ಗೆ ಮಕ್ಕಳ ಆಯೋಗ ಸೂಚನೆ ನೀಡಿದೆ.

ದೇವಬಂದ್‌ (ಉ.ಪ್ರ.): ಆಗಾಗ ವಿವಾದಿತ ಫತ್ವಾಗಳನ್ನು ಹೊರಡಿಸಿ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ದಾರುಲ್‌ ಉಲೂಂ ದೇವಬಂದ್‌ ಮದರಸಾ, ಈಗ ಘಜ್ವಾ ಎ ಹಿಂದ್‌ (ಭಾರತ ದಾಳಿಯಲ್ಲಿ ಹುತಾತ್ಮರಾದ ಮುಸ್ಲಿಮರು) ಕುರಿತಂತೆ ಫತ್ವಾ ಹೊರಡಿಸಿ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಈ ಸಂಬಂಧ ದೇವ್‌ಬಂದ್ ವಿರುದ್ಧ ಪ್ರಕರಣ ದಾಖಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ರಾಷ್ಟ್ರೀಯ ಮಕ್ಕಳ ಆಯೋಗವು ಸೂಚಿಸಿದೆ.

ಇತ್ತೀಚೆಗೆ ಕೆಲವರು ಘಜ್ವಾ ಎ ಹಿಂದ್‌ ಬಗ್ಗೆ ದೇವಬಂದ್‌ಗೆ ಕೆಲವು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ದೇವಬಂದ್‌, ಭಾರತವು ನಡೆಸಿದ ದಾಳಿಗಳಲ್ಲಿ ಪ್ರಾಣ ಕಳೆದುಕೊಳ್ಳುವವರನ್ನು ಮಹಾನ್ ತ್ಯಾಗಿಗಳು ಎಂದು ಶ್ಲಾಘಿಸಲಾಗುತ್ತದೆ ಎಂದು ವಿಶ್ಲೇಷಿಸಿದೆ.ಇದಕ್ಕೆ ಕಿಡಿಕಾರಿರುವ ಮಕ್ಕಳ ಆಯೋಗ, ಮದರಸಾದ ಈ ಹೇಳಿಕೆ ಮಕ್ಕಳಲ್ಲಿ ದ್ವೇಷ ಭಾವನೆ ಮೂಡಿಸುತ್ತದೆ ಹಾಗೂ ಘಜ್ವಾ ಎ ಹಿಂದ್‌ ಅನ್ನು ವೈಭವೀಕರಿಸುತ್ತದೆ. ಹೀಗಾಗಿ ಅದರ ವಿರುದ್ಧ ಕೇಸು ದಾಖಲಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ
ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ