ಜಗದೀಶನ್‌ಗೆ ಕೈತಪ್ಪಿದ ದ್ವಿಶತಕ!

KannadaprabhaNewsNetwork |  
Published : Sep 06, 2025, 01:00 AM IST
ಜಗದೀಶನ್  | Kannada Prabha

ಸಾರಾಂಶ

ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರ ವಲಯ ವಿರುದ್ಧ ದಕ್ಷಿಣ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 536 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ. ಮೊದಲ ದಿನದಂತ್ಯಕ್ಕೆ ಔಟಾಗದೆ 148 ರನ್‌ ಗಳಿಸಿದ್ದ ಎನ್‌.ಜಗದೀಶನ್‌ ಶುಕ್ರವಾರ 197 ರನ್‌ಗೆ ಔಟಾಗುವ ಮೂಲಕ ದ್ವಿಶತಕದಿಂದ ವಂಚಿತರಾದರು.

 ಬೆಂಗಳೂರು: ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರ ವಲಯ ವಿರುದ್ಧ ದಕ್ಷಿಣ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 536 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ. ಮೊದಲ ದಿನದಂತ್ಯಕ್ಕೆ ಔಟಾಗದೆ 148 ರನ್‌ ಗಳಿಸಿದ್ದ ಎನ್‌.ಜಗದೀಶನ್‌ ಶುಕ್ರವಾರ 197 ರನ್‌ಗೆ ಔಟಾಗುವ ಮೂಲಕ ದ್ವಿಶತಕದಿಂದ ವಂಚಿತರಾದರು.

ಕೆಳ ಕ್ರಮಾಂಕದಿಂದಲೂ ಉತ್ತಮ ಕೊಡುಗೆ ಮೂಡಿಬಂದ ಕಾರಣ, ದಕ್ಷಿಣ ವಲಯ ದೊಡ್ಡ ಮೊತ್ತ ಪೇರಿಸಿತು. ಇನ್ನು ಪಶ್ಚಿಮ ವಲಯವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 438 ರನ್‌ಗೆ ಆಲೌಟ್‌ ಮಾಡಿದ ಕೇಂದ್ರ ವಲಯ, 2ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿದೆ. ಶುಭಂ ಶರ್ಮಾ 60, ನಾಯಕ ರಜತ್‌ ಪಾಟೀದಾರ್‌ 47 ರನ್‌ ಗಳಿಸಿ ಔಟಾಗದೆ ಉಳಿದಿದ್ದು, ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ. ಪಂದ್ಯದಲ್ಲಿ ಇನ್ನೂ 2 ದಿನ ಬಾಕಿ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ