ದಿಲ್ಲಿ ಅಬಕಾರಿ ಹಗರಣ: ಆಪ್‌ ಸಚಿವ ಕೈಲಾಶ್‌ ಗೆಹ್ಲೋಟ್‌ ಇ.ಡಿ. ಬಿಸಿ

KannadaprabhaNewsNetwork |  
Published : Mar 31, 2024, 02:09 AM IST
ಕೈಲಾಶ್‌ | Kannada Prabha

ಸಾರಾಂಶ

ಕರಡು ಸಮಿತಿಯಲ್ಲಿದ್ದಕ್ಕೆ ಸಮನ್ಸ್‌ ನೀಡಿ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ

ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನವಾಗಿರುವ ನಡುವೆಯೇ, ದೆಹಲಿಯ ಕಾನೂನು ಸಚಿವ ಕೈಲಾಶ್‌ ಗೆಹ್ಲೋಟ್‌ರನ್ನು ಜಾರಿ ನಿರ್ದೇಶನಾಲಯ ಶನಿವಾರ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ, ‘ಜಾರಿ ನಿರ್ದೇಶನಾಲಯವು ನನ್ನನ್ನು ಅಬಕಾರಿ ನೀತಿಯನ್ನು ರೂಪಿಸುವ ತಂಡದ ಸದಸ್ಯನಾಗಿದ್ದ ಹಿನ್ನೆಲೆಯಲ್ಲಿ ನೀತಿಗೆ ಸಂಬಂಧಪಟ್ಟ ಸಂಗತಿಗಳ ಕುರಿತು ವಿಚಾರಣೆ ನಡೆಸಿದೆ’ ಎಂದು ತಿಳಿಸಿದರು.

ಕೈಲಾಶ್‌ ಗೆಹ್ಲೋಟ್‌ ಅವರಿಗೆ ಇದು ಜಾರಿ ನಿರ್ದೇಶನಾಲಯದಿಂದ ಜಾರಿ ಮಾಡಿದ್ದ ಎರಡನೇ ಸಮನ್ಸ್‌ ಆಗಿದ್ದು, ಮೊದಲ ಸಮನ್ಸ್‌ಗೆ ಬಜೆಟ್‌ ಅಧಿವೇಶನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಗೈರಾಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ