ತ್ರಿವಳಿ ತಲಾಖ್‌ ಪದ್ಧತಿ ಅಂತ್ಯ, ಹಜ್‌ ಕೋಟಾ ಪ್ರವಾಸದ ಸಂಖ್ಯೆ ಹೆಚ್ಚಳ: ಪ್ರಧಾನಿ

KannadaprabhaNewsNetwork |  
Published : Apr 23, 2024, 12:46 AM ISTUpdated : Apr 23, 2024, 07:51 AM IST
ಮೋದಿ | Kannada Prabha

ಸಾರಾಂಶ

  ಪ್ರಧಾನಿ ಮೋದಿ, ಸೋಮವಾರದ ಚುನಾವಣಾ ಪ್ರಚಾರದ ವೇಳೆ ಮುಸ್ಲಿಂ ಸಮುದಾಯದ ಒಳಿತಿಗಾಗಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳನ್ನು ಮತ್ತೊಮ್ಮೆ ಸ್ಮರಿಸಿದ್ದಾರೆ.

ಅಲಿಗಢ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ನೀತಿಯಂತೆ ಮುಸಲ್ಮಾನರು, ಒಳನುಸುಳುಕೋರರು ಹಾಗೂ ‘ಹೆಚ್ಚು ಮಕ್ಕಳಿದ್ದವರಿಗೆ’ ಹಂಚಲಾಗುತ್ತದೆ ಎಂದು ಭಾನುವಾರದ ಕಿಡಿಕಾರಿದ್ದ ಪ್ರಧಾನಿ ಮೋದಿ, ಸೋಮವಾರದ ಚುನಾವಣಾ ಪ್ರಚಾರದ ವೇಳೆ ಮುಸ್ಲಿಂ ಸಮುದಾಯದ ಒಳಿತಿಗಾಗಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳನ್ನು ಮತ್ತೊಮ್ಮೆ ಸ್ಮರಿಸಿದ್ದಾರೆ.

ಸೋಮವಾರ ಅಲಿಗಢದಲ್ಲಿ ಮಾತನಾಡಿದ ಮೋದಿ, ‘ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷವು ಓಲೈಕೆ ರಾಜಕಾರಣದಿಂದ ಮುಸ್ಲಿಂರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ಏನೂ ಮಾಡಿಲ್ಲ. ಆದರೆ ನಮ್ಮ ಸರ್ಕಾರ ತ್ರಿವಳಿ ತಲಾಖ್‌ ನೀಡುವ ಪದ್ಧತಿ ವಿರುದ್ಧ ಕಾನೂನು ರಚಿಸುವ ಮೂಲಕ ಅದಕ್ಕೆ ಅಂತ್ಯವಾಡಿ ಮುಸ್ಲಿಂ ಮಹಿಳೆಯರ ಜೀವನಕ್ಕೆ ಭದ್ರತೆ ಒದಗಿಸಿದೆ. ಮುಸ್ಲಿಂ ಬಾಂಧವರಿಗೆ ನೀಡುವ ಹಜ್‌ ಕೋಟಾ ಪ್ರಮಾಣ ಹೆಚ್ಚಿಸಲಾಗಿದೆ’ ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ