ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹರ್ಯಾಣದ 200ಕ್ಕೂ ರೈತ ಸಂಘಟನೆಗಳು ಫೆ.13ರಂದು ದಿಲ್ಲಿ ಚಲೋಗೆ ಕರೆ ನೀಡಿವೆ. ಈ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಭಾಗಿಯಾಗುವ ನಿರೀಕ್ಷೆ ಇದೆ.
ಈ ಹಿನ್ನೆಲೆಯಲ್ಲಿ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸ್ಸಾರ್, ಫತೇಹಾಬಾದ್ ಹಾಗೂ ಸಿರ್ಸಾ ಜಿಲ್ಲೆಗಳಲ್ಲಿ ಫೆ.11ರಿಮದ 13ರವರೆಗೆ ಮೊಬೈಲ್ ಇಂಟರ್ನೆಟ್ ಮತ್ತು ಸಮೂಹ ಎಸ್ಎಂಎಸ್ ಸೇವೆಯನ್ನು ಬಂದ್ ಮಾಡಲು ಆದೇಶಿಸಲಾಗಿದೆ.
2020-21ರಲ್ಲಿ ರೈತರ ಪ್ರತಿಭಟನೆ ವೇಳೆ ಹಿಂಸೆ ಹಾಗೂ ಗಲಭೆ ತಾರಕ್ಕೆ ಏರಿತ್ತು. ಇದರಿಂದಾಗಿ ಹತ್ತಾರು ಜನ ಅಸುನೀಗಿದ್ದರು. ರೈತರ ಸಂಘರ್ಷ ಕೋಮುಬಣ್ಣಕ್ಕೆ ತಿರುಗಿ ದೆಹಲಿ ಅಕ್ಷರಶಃ ತತ್ತರಿಸಿತ್ತು.
ಈ ಬಾರಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್ ಬಂದ್ ಮಾಡಲು ಸರ್ಕಾರ ಮುಂದಾಗಿದೆ.