ದಿಲ್ಲಿ ಇಸ್ರೇಲ್‌ ಕಚೇರಿ ಸಮೀಪಸ್ಫೋಟ ಮಾಡಿದ್ದ ಬಾಂಬರ್‌ಗೆ ತಲಾಶ್‌

KannadaprabhaNewsNetwork |  
Published : Dec 28, 2023, 01:45 AM ISTUpdated : Dec 28, 2023, 01:46 AM IST
ವಿಧಿ ವಿಜ್ಞಾನ ತಂಡದಿಂದ ಪರಿಶೀಲನೆ | Kannada Prabha

ಸಾರಾಂಶ

ದೂತಾವಾಸ ಕಚೇರಿಯಲ್ಲಿ ಬಾಂಬ್‌ ಸ್ಫೋಟಕ್ಕೂ ಮುನ್ನ ಇಬ್ಬರು ಇದ್ದ ವಿಡಿಯೋ ಪತ್ತೆ ಹಚ್ಚಲಾಗಿದ್ದು, ಇದು ಶಂಕಿತ ಭಯೋತ್ಪಾದಕ ದಾಳಿ ಎಂದು ಇಸ್ರೇಲ್‌ ಆರೋಪಿಸಿದೆ.

ಪಿಟಿಐ ನವದೆಹಲಿಹಮಾಸ್‌ ಉಗ್ರರ ಮೇಲೆ ಇಸ್ರೇಲ್‌ ಯುದ್ಧ ಸಾರಿರುವಾಗಲೇ ದೆಹಲಿಯಲ್ಲಿರುವ ಆ ದೇಶದ ರಾಯಭಾರ ಕಚೇರಿಯ ಬಳಿ ಮಂಗಳವಾರ ಸಂಜೆ ಸ್ಫೋಟ ಸಂಭವಿಸಿದ್ದು, ಆ ಸ್ಫೋಟಕ್ಕೆ ಕಾರಣರಾದವರಿಗಾಗಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.ಬಾಂಬ್‌ ಸ್ಫೋಟಗೊಳ್ಳುವ ಕೆಲವೇ ಕ್ಷಣಗಳ ಮುನ್ನ ಇಬ್ಬರು ಯುವಕರು ಸ್ಫೋಟ ನಡೆದ ಸ್ಥಳದಲ್ಲಿ ಅಡ್ಡಾಡುತ್ತಿರುವ ವಿಡಿಯೋ ಭದ್ರತಾ ಪಡೆಗಳಿಗೆ ದೊರೆತಿದೆ. ಈ ನಡುವೆ, ದೆಹಲಿಯ ತನ್ನ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಶಂಕಿತ ಭಯೋತ್ಪಾದಕ ದಾಳಿಯಂತಿದ್ದು, ಭಾರತದಲ್ಲಿರುವ ತನ್ನ ಪ್ರಜೆಗಳು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಇಸ್ರೇಲ್‌ ಸಂದೇಶ ನೀಡಿದೆ. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಇಸ್ರೇಲ್‌ ಅನ್ನು ನಿಂದಿಸುವ ಪತ್ರವನ್ನು ದೊರೆತಿದೆ ಎಂಬುದು ಗಮನಾರ್ಹ.ಈ ನಡುವೆ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯದ ಪರಿಣತರ ಜತೆ ಸ್ಫೋಟ ಸ್ಥಳಕ್ಕೆ ಭೇಟಿ ನೀಡಿ, ಎಲೆ ಹಾಗೂ ಹುಲ್ಲನ್ನು ಸಂಗ್ರಹಿಸಿದ್ದಾರೆ. ಸ್ಫೋಟಕ್ಕೆ ಬಳಸಿರುವ ವಸ್ತು ಅವುಗಳಿಗೆ ಅಂಟಿಕೊಂಡಿರಬಹುದು ಎಂಬ ಕಾರಣಕ್ಕೆ ಈ ಸಂಗ್ರಹ ಕಾರ್ಯ ನಡೆದಿದೆ. ಈ ಮಧ್ಯೆ ಎನ್‌ಎಸ್‌ಜಿಯ ಶ್ವಾನದಳ ಕೂಡ ಪರಿಶೀಲನೆ ನಡೆಸಿದೆ. ಈ ನಡುವೆ, ದೆಹಲಿ ಪೊಲೀಸರ ವಿಶೇಷ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನಾ ಸ್ಥಳದಲ್ಲಿ ಅರೆಸೇನಾ ಪಡೆಯನ್ನು ನಿಯೋಜನೆ ಮಾಡಲಾಗಿದೆ. ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲು ಮಾಡುವ ಬಗ್ಗೆ ಚಿಂತನೆಯಲ್ಲಿದ್ದಾರೆ.ಸ್ಫೋಟದ ಬೆನ್ನಲ್ಲೇ ಇಸ್ರೇಲ್‌ ರಾಯಭಾರ ಕಚೇರಿ ಹಾಗೂ ದೆಹಲಿಯಲ್ಲಿನ ಯಹೂದಿಗಳು ನೆಲೆಸಿರುವ ಸ್ಥಳದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.ಇಸ್ರೇಲ್‌ ಸೂಚನೆ:ಬಹಿರಂಗವಾಗಿ ಇಸ್ರೇಲ್‌ ಲಾಂಛನವನ್ನು ಪ್ರದರ್ಶನ ಮಾಡುವುದು, ಹೆಚ್ಚು ಭದ್ರತೆ ಇಲ್ಲದ ದೊಡ್ಡ ಕಾರ್ಯಕ್ರಮಗಳಿಗೆ ತೆರಳುವುದು, ತಾವು ಹಮ್ಮಿಕೊಳ್ಳುವ ಕಾಯಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳದಂತೆ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಭಾರತದಲ್ಲಿನ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!