ವೈದ್ಯರ ಎಡವಟ್ಟು: ಕೈ ಬೆರಳಿಗೆ ಬದಲು ನಾಲಿಗೆಗೆ ಶಸ್ತ್ರ ಚಿಕಿತ್ಸೆ

KannadaprabhaNewsNetwork |  
Published : May 17, 2024, 12:38 AM ISTUpdated : May 17, 2024, 05:33 AM IST
ಶಸ್ತ್ರಾಸ್ತ್ರ | Kannada Prabha

ಸಾರಾಂಶ

ಕೈ ಬೆರಳಿನ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ 4 ವರ್ಷ ಮಗುವಿನ ಬೆರಳಿನ ಬದಲು ವೈದ್ಯರು ಗಂಟಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಆಘಾತಕಾರಿ ಘಟನೆ ಕೇರಳದ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

ಕಲ್ಲಿಕೋಟೆ: ಕೈ ಬೆರಳಿನ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ 4 ವರ್ಷ ಮಗುವಿನ ಬೆರಳಿನ ಬದಲು ವೈದ್ಯರು ಗಂಟಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಆಘಾತಕಾರಿ ಘಟನೆ ಕೇರಳದ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

ನಾಲ್ಕು ವರ್ಷದ ಮಗುವಿಗೆ 6 ಕೈ ಬೆರಳುಗಳು ಇದ್ದು, ಅದರಲ್ಲಿ ಒಂದು ಬೆರಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಬೇಕಿದ್ದ ವೈದ್ಯರು ಮೈಮರೆತು ಆ ಮಗುವಿನ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡದೇ ನಾಲಿಗೆಗೆ ಶಸ್ತ್ರ ಚಿಕಿತ್ಸೆ ಮಾಡಿಬಿಟ್ಟಿದ್ದಾರೆ. ಕೇಳಿದರೆ ಗಂಟಲಲ್ಲೂ ತೊಂದರೆ ಇತ್ತು ಹಾಗಾಗಿ ಶಸ್ತ್ರಚಿಕಿತ್ಸೆ ಮಾಡಲಾಯ್ತು ಎಂದು ಹಾರಿಕೆ ಉತ್ತರ ನೀಡಿದ್ದಾರೆ. 

ಈ ಬಗ್ಗೆ ಪೋಷಕರ ಗದರಿದ ಬಳಿಕ ಘಟನೆ ಕುರಿತು ಕ್ಷಮೆಯಾಚಿಸಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.ಕೆಲ ದಿನಗಳ ಹಿಂದೆ ವೈದ್ಯರು ಶಸ್ತ್ರಚಿಕಿತ್ಸೆ ಬಳಿಕ ಕತ್ತರಿಯನ್ನು ಮಹಿಳೆಯ ಹೊಟ್ಟೆಯಲ್ಲೇ ಬಿಟ್ಟು ವಿವಾದಕ್ಕೀಡಾಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ