ಏನಿದು ವದಂತಿ?
- ಹೀಗಾಗಿ ಹಲವು ದೇಶಗಳಲ್ಲಿ ಶಾಲಾ-ಕಾಲೇಜು, ಕಚೇರಿಗಳಿಗೆ ರಜೆ ಘೋಷಣೆ
- ತೈಲ ಉಳಿಸುವ ಉದ್ದೇಶದಿಂದ ಕೋವಿಡ್ ರೀತಿ ದೇಶದಲ್ಲಿ ಲಾಕ್ಡೌನ್ ವದಂತಿ- ಅಂತಹ ಪ್ರಸ್ತಾವವೇ ಪರಿಶೀಲನೆಯಲ್ಲಿಲ್ಲ ಎಂದ ಸಚಿವರಾದ ನಿರ್ಮಲಾ, ಪುರಿ
--ನವದೆಹಲಿ: ‘ಮಧ್ಯಪ್ರಾಚ್ಯ ಯುದ್ಧದ ಕಾರಣ ದೇಶದಲ್ಲಿ ದೇಶದಲ್ಲಿ ತೈಲ ಹಾಹಾಕಾರ ಉಂಟಾಗಬಹುದು. ಹೀಗಾಗಿ ತೈಲ ಉಳಿತಾಯಕ್ಕಾಗಿ ಕೋವಿಡ್ ಅವಧಿಯಂತೆಯೇ ಲಾಕ್ಡೌನ್ ಘೋಷಿಸಲಾಗುತ್ತದೆ’ ಎಂಬ ವದಂತಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು, ‘ಇಂಥ ಸುಳ್ಳು ಸುದ್ದಿಗಳನ್ನು ನಂಬಬೇಡಿ, ಒಗ್ಗಟ್ಟಾಗಿರಿ’ ಎಂದು ಮನವಿ ಮಾಡಿದೆ.
‘ಕೋವಿಡ್ ಸಮಯದಂತೆಯೇ ಭಾರತದಲ್ಲಿ ಲಾಕ್ಡೌನ್ ಘೋಷಿಸಲಾಗುತ್ತದೆ ಎಂಬ ವದಂತಿಗಳು ಸಂಪೂರ್ಣವಾಗಿ ಸುಳ್ಳು. ಅಂತಹ ಯಾವುದೇ ಪ್ರಸ್ತಾವ ಭಾರತ ಸರ್ಕಾರದ ಪರಿಶೀಲನೆಯಲ್ಲಿಲ್ಲ. ಇಂತಹ ಸಮಯದಲ್ಲಿ, ನಾವು ಶಾಂತವಾಗಿ, ಜವಾಬ್ದಾರಿಯುತವಾಗಿ ಮತ್ತು ಒಗ್ಗಟ್ಟಿನಿಂದ ಇರುವುದು ಮುಖ್ಯ. ಮೋದಿ ಸರ್ಕಾರ ಎಲ್ಲ ಅಗತ್ಯ ತೈಲ ಹಾಗೂ ಅನಿಲ ದಾಸ್ತಾನು ಮಾಡಿದೆ. ಚಿಂತಿಸುವ ಅಗತ್ಯವಿಲ್ಲ’ ಎಂದಿದ್ದಾರೆ.
ಪಾಕ್ನಲ್ಲಿ ಇತ್ತೀಚೆಗೆ ತೈಲ ಉಳಿಸಲು ಸರ್ಕಾರವು ಶಾಲೆಗಳಿಗೆ ರಜೆ ಹಾಗೂ ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಿತ್ತು.