ಸತ್ತ ಮೀನು ಪತ್ತೆ ಹಿನ್ನೆಲೆ: ಗ್ಯಾನವಾಪಿ ‘ಶಿವಲಿಂಗ’ ಕೊಳದಲ್ಲಿ ಸ್ವಚ್ಛತೆ

KannadaprabhaNewsNetwork |  
Published : Jan 21, 2024, 01:31 AM ISTUpdated : Jan 21, 2024, 02:43 PM IST
ಗ್ಯಾನವಾಪಿ ಮಸೀದಿ ಕೊಳ | Kannada Prabha

ಸಾರಾಂಶ

ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿರುವ ಗ್ಯಾನವಾಪಿ ಮಸೀದಿಯ ಕೊಳದಲ್ಲಿ ಶನಿವಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ವಾರಾಣಸಿ: ಸತ್ತ ಮೀನುಗಳು ಪತ್ತೆಯಾದ ಹಿನ್ನೆಲೆಯಲ್ಲಿ, ವಾರಾಣಸಿ ಗ್ಯಾನವಾಪಿ ಮಸೀದಿಯ ಶಿವಲಿಂಗ ರೂಪಿ ಆಕೃತಿ ಪತ್ತೆಯಾದ ಕೊಳದಲ್ಲಿ ಶನಿವಾರ ಸ್ವಚ್ಛತಾ ಕಾರ್ಯ ನಡೆಯಿತು.

ಸುಪ್ರೀಂ ಕೋರ್ಟ್‌ ಸೂಚನಾನುಸಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ಸ್ವಚ್ಛತೆ ನಡೆಯಿತು. ಕೊಳದಲ್ಲಿದ್ದ ಸತ್ತ ಮೀನುಗಳನ್ನು ಪೌರಕಾರ್ಮಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಮಸೀದಿ ಸಮಿತಿ ತಿಳಿಸಿದೆ.ಇನ್ನು, ಈ ಕುರಿತು ಮಾಹಿತಿ ನೀಡಿದ ಹಿಂದು ಪರ ವಕಿಳ ಸುಧೀರ್‌ ತ್ರಿಪಾಠಿ, ‘ಎಲ್ಲ ಕಕ್ಷಿದಾರರು, ಪ್ರತಿವಾದಿಗಳು ಮತ್ತು ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಮಸೀದಿಯ ಕೊಳದಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ.

ಮೊದಲಿಗೆ ನೀರನ್ನು ಸಂಪೂರ್ಣ ಹೊರತೆಗೆದು, 26 ಪೌರ ಕಾರ್ಮಿಕರ ಗುಂಪು ಸ್ವಚ್ಛತಾ ಕಾರ್ಯವನ್ನು ಮಾಡಿತು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗೊಗೋಯ್‌ ಪಾಕ್‌ ನಂಟಿನ ಬಗ್ಗೆ ಕೇಂದ್ರೀಯ ತನಿಖೆಗೆ ಶಿಫಾರಸು
ಅಮೆರಿಕ ಡೀಲ್‌ ವಿರುದ್ಧ ಫೆ.12ಕ್ಕೆ ದೇಶವ್ಯಾಪಿ ರೈತ ಪ್ರತಿಭಟನೆ