ಭಿನ್ನಾಭಿಪ್ರಾಯ ಸಾರ್ವಜನಿಕವಾಗಿ ಚರ್ಚಿಸಲ್ಲ: ಸಂಸದ
ಆಪರೇಷನ್ ಸಿಂದೂರ ನಿಲುವಿಗೆ ಈಗಲೂ ಬದ್ಧ: ಶಶಿ
ಕಲ್ಲಿಕೋಟೆ: ಪಕ್ಷದ ಜೊತೆಗೆ ತಮಗೆ ಕೆಲವು ಭಿನ್ನಾಭಿಪ್ರಾಯ ಇರುವುದನ್ನು ತಿರುವನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ ಒಪ್ಪಿಕೊಂಡಿದ್ದಾರೆ. ಆದರ ಇದನ್ನು ಸಾರ್ವ ಜನಿಕವಾಗಿ ಚರ್ಚಿಸದೆ ನಾಯಕರೊಂದಿಗೆ ಮಾತನಾಡಿ ಇತ್ಯರ್ಥ ಪಡಿಸಿಕೊಳ್ಳುತ್ತೇವೆ. ನಾನು ಇದುವರೆಗೂ ಪಕ್ಷದ ಯಾವುದೇ ನಿಯಮ ಉಲ್ಲಂಘಿಸಿಲ್ಲ’ ಎಂದಿದ್ದಾರೆ.ಶುಕ್ರವಾರ ಕಾಂಗ್ರೆಸ್ ಹೈಕಮಾಂಡ್ ಸಭೆಗೆ ತರೂರ್ ಗೈರಾಗಿದ್ದರು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗಿನ ಮುನಿಸಿನ ಕಾರಣದಿಂದ ತರೂರ್ ಸಭೆಗೆ ಹಾಜರಾಗಲಿಲ್ಲ ಎನ್ನುವ ವದಂತಿ ಹಬ್ಬಿತ್ತು. ಶನಿವಾರ ಈ ಬಗ್ಗೆ ಕೈ ನಾಯಕ ಮಾತನಾಡಿದ್ದು, ‘ ಪಕ್ಷದಲ್ಲಿ ಕೆಲವೊಂದು ಸಮಸ್ಯೆಗಳಿವೆ. ಆದರೆ ಅದನ್ನು ನಾಯಕರೊಂದಿಗೆ ಚರ್ಚಿಸಬೇಕು. ಮಾಧ್ಯಮ, ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸುವುದಲ್ಲ. ನಾನು ಅಧಿವೇಶನಕ್ಕಾಗಿ ದೆಹಲಿಗೆ ಹೋಗುತ್ತೇನೆ. ಅಲ್ಲಿ ನಾಯಕರೊಂದಿಗೆ ಮಾತನಾಡುತ್ತೇನೆ. ನಾನು ಕಳೆದ 17 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದೇನೆ. ಏನೇ ತಪ್ಪಾಗಿದ್ದರೂ ಅದನ್ನು ಬಗೆ ಹರಿಸಬೇಕಿದೆ. ಸೂಕ್ತ ವೇದಿಕೆಯಲ್ಲಿ ಪರಿಹರಿಸುತ್ತೇವೆ’ ಎಂದಿದ್ದಾರೆ.
ಸಿಂದೂರ ನಿಲುವಿಗೆ ಬದ್ಧ:
ತರೂರ್ ಹೇಳಿದ್ದೇನು?
ಇದು ಮಾಧ್ಯಮ, ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸುವುದಲ್ಲ. ಅಧಿವೇಶನಕ್ಕೆ ಹೋದಾಗ ಈ ಬಗ್ಗೆ ಪ್ರಸ್ತಾಪಿಸುವೆ
ವಿಧಾನಸಭಾ ಚುನಾವಣೆ ಕುರಿತ ದಿಲ್ಲಿ ಸಭೆಗೆ ಆಗಮಿಸುತ್ತಿಲ್ಲ ಎಂದು ಮೊದಲೇ ತಿಳಿಸಿದ್ದೆ. ಮುನಿಸಿ ಆರೋಪ ಸರಿಯಲ್ಲ
ಅದು ದೇಶ ಮೊದಲು ಎಂಬ ನನ್ನ ನಿಲುವಿನದ್ದು. ಈ ಬಗ್ಗೆ ನಾನು ಕ್ಷಮೆಯಾಚಿಸಬೇಕಾದ ಅಗತ್ಯವಿಲ್ಲ