ಶತ್ರುರಾಷ್ಟ್ರದಲ್ಲಿ ಜೆಟ್‌ ಕ್ರ್ಯಾಶ್‌ ಆದ್ರೆ ಪೈಲಟ್‌ ಏನು ಮಾಡ್ತಾರೆ?

KannadaprabhaNewsNetwork |  
Published : Apr 05, 2026, 01:45 AM IST
ಪೈಲಟ್‌ | Kannada Prabha

ಸಾರಾಂಶ

ವಿಮಾನವು ಶತ್ರುರಾಷ್ಟ್ರದ ಆಗಸದಲ್ಲಿ ಹಾರುತ್ತುದ್ದ ವೇಳೆ ದಾಳಿಗೆ ತುತ್ತಾಗಿ ಪತನವಾದರೆ, ಆ ರಾಷ್ಟ್ರದ ಜನ ಅಥವಾ ಸೈನಿಕರ ಕೈಗೆ ಸೆರೆಸಿಗದೆ ತಪ್ಪಿಸಿಕೊಳ್ಳದೆ ಪಾರಾಗುವುದೇ ಬಹುದೊಡ್ಡ ಸವಾಲು. ಅವರು ಹೀಗೆಯೇ ನಡೆದುಕೊಳ್ಳಬೇಕು ಎಂದು ಪ್ರತಿ ದೇಶದ ಸೇನೆಯೂ ಶಿಷ್ಟಾಚಾರಗಳನ್ನು ರೂಪಿಸುತ್ತಿರುತ್ತದೆ. ಇಂತಹ ಶಿಷ್ಟಾಚಾರ ಹೇಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ.

ಆರೋಗ್ಯ, ಗೌಪ್ಯತೆ, ರಕ್ಷಣೆ ಮೊದಲ ಆದ್ಯತೆ

ವಿಮಾನವು ಶತ್ರುರಾಷ್ಟ್ರದ ಆಗಸದಲ್ಲಿ ಹಾರುತ್ತುದ್ದ ವೇಳೆ ದಾಳಿಗೆ ತುತ್ತಾಗಿ ಪತನವಾದರೆ, ಆ ರಾಷ್ಟ್ರದ ಜನ ಅಥವಾ ಸೈನಿಕರ ಕೈಗೆ ಸೆರೆಸಿಗದೆ ತಪ್ಪಿಸಿಕೊಳ್ಳದೆ ಪಾರಾಗುವುದೇ ಬಹುದೊಡ್ಡ ಸವಾಲು. ಅವರು ಹೀಗೆಯೇ ನಡೆದುಕೊಳ್ಳಬೇಕು ಎಂದು ಪ್ರತಿ ದೇಶದ ಸೇನೆಯೂ ಶಿಷ್ಟಾಚಾರಗಳನ್ನು ರೂಪಿಸುತ್ತಿರುತ್ತದೆ. ಇಂತಹ ಶಿಷ್ಟಾಚಾರ ಹೇಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ.

==

- ಪತನವಾಗುತ್ತಿರುವ ವಿಮಾನದಿಂದ ಪ್ಯಾರಾಚೂಟ್‌ ಮೂಲಕ ಪೈಲಟ್‌ಗಳು ಹೊರಬರುವರಾದರೂ, ಹೋಗಿ ಬೀಳುವ ಜಾಗ ಎಂಥದ್ದೆಂದು ತಿಳಿದಿರುವುದಿಲ್ಲ. ಹಾಗಾಗಿ ನೆಲ ಮುಟ್ಟುತ್ತಿದ್ದಂತೆ ತಮ್ಮ ದೈಹಿಕ ಸ್ಥಿತಿಯನ್ನು ಪರಿಶೀಲಿಸಿಕೊಂಡು, ಕದಲಲು, ನಡೆಯಲು ಸಮರ್ಥನಾಗಿರುವೆನೇ ಎಂದು ನೋಡಿಕೊಳ್ಳುತ್ತಾರೆ. ಗಾಯಗಳಾಗಿದ್ದರೆ ಪ್ರಥಮ ಚಿಕಿತ್ಸೆ ಕೊಟ್ಟುಕೊಳ್ಳುತ್ತಾರೆ.

- ಬಳಿಕ ತಾವಿರುವ ಪ್ರದೇಶ ಯಾವುದೆಂದು ನೋಡುತ್ತಾರೆ. ಎದುರಾಳಿಗಳ ಗಡಿಯೊಳಗಿದ್ದರೆ, ಯಾರ ಕಣ್ಣಿಗೂ ಬೀಳದೆ ಹೇಗಿರುವುದು ಮತ್ತು ಅಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾರೆ. ಜತೆಗೆ ತಮ್ಮ ದೇಶ/ ಸೇನೆ/ಮಿತ್ರ ದೇಶಗಳ ಜೊತೆ ರಹಸ್ಯ ಸಾಧನಗಳ ಮೂಲಕ ಸಂಪರ್ಕ ಸಾಧಿಸಲು ಯತ್ನಿಸುತ್ತಾರೆ.

- ಇದೇ ವೇಳೆ ತಮ್ಮ ಗುರುತನ್ನು ಬಯಲುಮಾಡುವ ಎಲ್ಲಾ ಕಡತಗಳನ್ನು ನಾಸಪಡಿಸುತ್ತಾರೆ.

- ಒಂದೊಮ್ಮೆ ನಗರಪ್ರದೇಶದಲ್ಲಿದ್ದರೆ ಮನೆಯ ಮಹಡಿಗಳಂತಹ ಎತ್ತರದ ಪ್ರದೇಶ ಸೇರಿಕೊಳ್ಳುತ್ತಾರೆ. ಹಳ್ಳಿಯಾದರೆ ಹೊಲ-ಗದ್ದೆಗಳಲ್ಲಿ ಅವಿತು ಕೂರುತ್ತಾರೆ. ಇಂತಹ ಪ್ರದೇಶಗಳಿಂದ ಅವರ ರಕ್ಷಣೆಯು ಸುಲಭವಾಗುತ್ತದೆ. ಇಂತಹ ಜಾಗಗಳನ್ನು ತಲುಪಲು ಜನಸಂಚಾರವಿರುವ ರಸ್ತೆಗಳನ್ನು ಬಳಸದೆ ಕಾಡುಮೇಡುಗಳ ಹಾದಿಯನ್ನು ನೆಚ್ಚಿಕೊಳ್ಳುತ್ತಾರೆ.

- ಪೈಲಟ್‌ ಸೀಟ್‌ನ ಅಡಿ ಇರುವ ಕಿಟ್‌ನಲ್ಲಿ ಅಲ್ಪಾವಧಿಗೆ ಬೇಕಾಗುವಂತಹ ನೀರು, ಆಹಾರ, ಔಷಧಿ ಇತ್ಯಾದಿಗಳು ಇರುತ್ತವೆ. ಅವರು ಧರಿಸುವ ಜ್ಯಾಕೆಟ್‌ನಲ್ಲಿ ಸಂಪರ್ಕ ಸಾಧನ, ಕಂಪಾಸ್‌, ಪಿಸ್ತೂಲ್‌ ಇರುತ್ತದೆ.

-ರೇಡಿಯೋ ಮೂಲಕ, ತಮ್ಮನ್ನು ರಕ್ಷಿಸಲು ಬರುತ್ತಿರುವವರ ಜತೆ ಸಂಪರ್ಕದಲ್ಲಿರುವ ಪೈಲಟ್‌ಗಳು, ಆ ಹೆಲಿಕಾಪ್ಟರು ಬರುತ್ತಿದ್ದಂತೆ ತಾವಿರುವ ತಾವನ್ನು ತಿಳಿಸಲು ಕಿಟ್‌ನಲ್ಲಲಿರುವ ಬೀಕನ್‌, ಸಿಳ್ಳೆ ಅಥವಾ ಹೊಗೆ ಬರುವ ಸಾಧನಗಳನ್ನು ಬಳಸುತ್ತಾರೆ.

- ಒಂದೊಮ್ಮೆ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯವೆನಿಸಿದರೆ ತಮ್ಮಲ್ಲಿರುವ ಕೋಡ್, ಮ್ಯಾಪ್‌, ನೋಟ್ಸ್‌ ಇತ್ಯಾದಿಗಳನ್ನು ನಾಶ ಮಾಡುತ್ತಾರೆ. ವೈರಗಳೆದುರು ತಮ್ಮ ಸೇನೆ, ದೇಶದ ಬಗ್ಗೆ ಏನನ್ನೂ ಬಾಯಿಬಿಡುವುದಿಲ್ಲ. ಯಶಸ್ವಿಯಾಗುವ ಭರವಸೆಯಿದ್ದರೆ ಮಾತ್ರವೇ ತಪ್ಪಿಸಿಕೊಳ್ಳಲು ಮುಂದಾಗುತ್ತಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪಾಕ್‌ನಲ್ಲೂ ‘ಶಕ್ತಿ’ ಮಾದರಿ ಉಚಿತ ಸಾರಿಗೆ!
ಗ್ಯಾಸ್‌ಟ್ರಬಲ್‌: ವಲಸೆ ಕಾರ್ಮಿಕರುಮರಳಿ ತವರು ರಾಜ್ಯಗಳಿಗೆ ಗುಳೆ!