ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದ ಸಾಕಾರ

KannadaprabhaNewsNetwork |  
Published : May 07, 2025, 12:54 AM IST
ಮೋದಿ | Kannada Prabha

ಸಾರಾಂಶ

ಅಮೆರಿಕ ಜತೆಗಿನ ತೆರಿಗೆ ಸಂಘರ್ಷದ ನಡುವೆಯೇ ಮಹತ್ವದ ಬೆಳವಣಿಗೆಯಲ್ಲಿ ಭಾರತ ಮತ್ತು ಬ್ರಿಟನ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಇದರೊಂದಿಗೆ, ಬ್ರಿಟನ್‌ ಭಾರತದೊಂದಿಗೆ ಈ ಒಪ್ಪಂದ ಮಾಡಿಕೊಂಡ 16ನೇ ದೇಶವಾಗಿದ್ದು, ಇನ್ನು ಉಭಯ ದೇಶಗಳ ನಡುವಿನ ವ್ಯಾಪಾರದ ಮೇಲಿನ ಆಮದು ತೆರಿಗೆಯಲ್ಲಿ ಶೇ.90ರಷ್ಟು ಇಳಿಕೆ ಆಗಲಿದೆ ಅಥವಾ ಸಂಪೂರ್ಣ ಇಲ್ಲವಾಗಲಿದೆ.

-ಸುಂಕರಹಿತ/ ಶೇ.90ರಷ್ಟು ತೆರಿಗೆ ರಹಿತ ವ್ಯಾಪಾರ ಸಾಧ್ಯ

-ಭಾರತ ಜತೆ ಒಪ್ಪಂದ ಮಾಡಿಕೊಂಡ 16ನೇ ದೇಶ ಬ್ರಿಟನ್‌

ನವದೆಹಲಿ: ಅಮೆರಿಕ ಜತೆಗಿನ ತೆರಿಗೆ ಸಂಘರ್ಷದ ನಡುವೆಯೇ ಮಹತ್ವದ ಬೆಳವಣಿಗೆಯಲ್ಲಿ ಭಾರತ ಮತ್ತು ಬ್ರಿಟನ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಇದರೊಂದಿಗೆ, ಬ್ರಿಟನ್‌ ಭಾರತದೊಂದಿಗೆ ಈ ಒಪ್ಪಂದ ಮಾಡಿಕೊಂಡ 16ನೇ ದೇಶವಾಗಿದ್ದು, ಇನ್ನು ಉಭಯ ದೇಶಗಳ ನಡುವಿನ ವ್ಯಾಪಾರದ ಮೇಲಿನ ಆಮದು ತೆರಿಗೆಯಲ್ಲಿ ಶೇ.90ರಷ್ಟು ಇಳಿಕೆ ಆಗಲಿದೆ ಅಥವಾ ಸಂಪೂರ್ಣ ಇಲ್ಲವಾಗಲಿದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಇದು ಐತಿಹಾಸಿಕ ಮೈಲುಗಲ್ಲು. ಈ ಒಪ್ಪಂದ ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುತ್ತದೆ. ಎರಡೂ ಆರ್ಥಿಕತೆಗಳಲ್ಲಿ ವ್ಯಾಪಾರ, ಹೂಡಿಕೆ, ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ನಾವೀನ್ಯತೆಯನ್ನು ವೇಗಗೊಳಿಸುತ್ತದೆ’ ಎಂದು ಬಣ್ಣಿಸಿದ್ದಾರೆ. ಅತ್ತ, ‘ಭಾರತದೊಂದಿಗಿನ ಈ ಒಪ್ಪಂದ ಬ್ರಿಟನ್‌ನ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದು ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್‌ ತಿಳಿಸಿದ್ದಾರೆ. ಶುಕ್ರವಾರ ಲಂಡನ್‌ನಲ್ಲಿ ನಡೆದ ಮಾತುಕತೆ ವೇಳೆ ಬ್ರಿಟನ್‌ನ ವ್ಯವಹಾರ ಮತ್ತು ವ್ಯಾಪಾರ ಕಾರ್ಯದರ್ಶಿ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಈ ಒಪ್ಪಂದವನ್ನು ಅಂತಿಮಗೊಳಿಸಿದರು.ಒಪ್ಪಂದದಿಂದ ಏನೇನು ಲಾಭ?:

- ಭಾರತದಿಂದ ರಫ್ತಾಗುವ ವಸ್ತುಗಳಿಗೆ ಬ್ರಿಟನ್‌ ಮಾರುಕಟ್ಟೆಯಲ್ಲಿ ಶೂನ್ಯ ಸುಂಕ- ಭಾರತದಿಂದ ಆಮದು ಸುಂಕ ಕಡಿತ. ಶೇ.90ರಷ್ಟು ತೆರಿಗೆ ಇಳಿಕೆ. ದಶಕದಲ್ಲಿ ಇದರ ಶೇ.85ರಷ್ಟು ವ್ಯಾಪಾರ ತೆರಿಗೆ ಮುಕ್ತ.- ಸೌಂದರ್ಯವರ್ಧಕ, ವಿಮಾನ, ವೈದ್ಯಕೀಯ ಸಾಧನ, ವಿದ್ಯುತ್ ಯಂತ್ರೋಪಕರಣ, ತಂಪು ಪಾನೀಯ, ಚಾಕೊಲೇಟ್ ಮತ್ತು ಬಿಸ್ಕತ್ತು ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಅಗ್ಗ.- ದ್ವಿಪಕ್ಷೀಯ ವ್ಯಾಪಾರ 2.88 ಲಕ್ಷ ಕೋಟಿ ರು. ಹೆಚ್ಚುವ ಸಾಧ್ಯತೆ

- ಬ್ರಿಟನ್‌ ಜತೆ ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದ ಹೊಂದಿರುವ ದೇಶಗಳೊಂದಿಗೆ ಸ್ಪರ್ಧಿಸಲು ಸಮಾನ ಅವಕಾಶ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ಖರ್ಗೆ ಹೆಗಲಿಗೆ ನಿರ್ಧಾರ ಯಾರು ಆಗ್ತಾರೆ ಕೇರಳಂ ಸಿಎಂ?
ಪಶ್ಚಿಮ ಬಂಗಾಳ ವಿಧಾನಸಭೆ ವಿರ್ಸಜನೆ ಗೌರ್‍ನರ್‌ ಗೇಟ್‌ ಪಾಸ್‌ : ದೀದಿ ಈಗ ಬೀದಿಗೆ!