ಹೈಜಾಕ್‌ ಆಗಿದ್ದ ಪಾಕಿಗಳಿದ್ದ ಇರಾನಿ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ

KannadaprabhaNewsNetwork |  
Published : Mar 31, 2024, 02:03 AM IST
ನೌಕಾಪಡೆ | Kannada Prabha

ಸಾರಾಂಶ

ಇಂಡಿಯಾ ಜಿಂದಾಬಾದ್‌ ಎಂದ ಪಾಕ್‌ ಮೀನುಗಾರರು ತಮ್ಮನ್ನು ರಕ್ಷಿಸಿದ್ದಕ್ಕೆ ಭಾರತೀಯ ನೌಕಾಪಡೆಗೆ ಧನ್ಯವಾದ ಸಲ್ಲಿಸಿದ್ದಾರೆ.

ನವದೆಹಲಿ: ಏಡೆನ್‌ ಕೊಲ್ಲಿಯಲ್ಲಿ 23 ಪಾಕಿಸ್ತಾನಿ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಇರಾನ್‌ ಮೀನುಗಾರಿಕಾ ಹಡಗು ‘ಆಲ್‌ ಕಂಬರ್‌’ ಅನ್ನು ಸೊಮಾಲಿಯಾ ಕಡಲ್ಗಳ್ಳರು ಹೈಜಾಕ್‌ ಮಾಡಿದ ಘಟನೆ ನಡೆದಿದೆ. ಆದರೆ ಈ ವೇಳೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ, ಕಡಲ್ಗಳ್ಳರಿಂದ ಹಡಗನ್ನು ಬಿಡಿಸಿ, ಅದರಲ್ಲಿದ್ದವರನ್ನು ರಕ್ಷಿಸಿದ್ದಾರೆ. ಅಲ್ಲದೆ ಹೈಜಾಕ್‌ ಮಾಡಿದ್ದ 9 ಕಡಲ್ಗಳ್ಳರನ್ನು ಭಾರತಕ್ಕೆ ಬಂಧಿಸಿ ಕರೆತರುತ್ತಿದ್ದಾರೆ. ಈ ನಡುವೆ ಕಡಲ್ಗಳ್ಳರ ವಶದಿಂದ ತಮ್ಮನ್ನು ಭಾರತೀಯ ಸಿಬ್ಬಂದಿ ರಕ್ಷಿಸಿದ ಬೆನ್ನಲ್ಲೇ ಪಾಕಿಸ್ತಾನಿಯರು ಇಂಡಿಯಾ ಜಿಂದಾಬಾದ್‌ ಎಂದು ಘೋಷಣೆ ಕೂಗಿ ಕೃತಜ್ಞತೆ ವ್ಯಕ್ತಪಡಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ