ನೊಯ್ಡಾದಲ್ಲಿ 242 ಅಡಿ ಆದಿಯೋಗಿ ಪ್ರತಿಮೆ!

KannadaprabhaNewsNetwork |  
Published : Feb 07, 2024, 01:49 AM ISTUpdated : Feb 07, 2024, 07:38 AM IST
ಆದಿಯೋಗಿ | Kannada Prabha

ಸಾರಾಂಶ

ನೊಯ್ಡಾದಲ್ಲಿ 200 ಎಕರೆ ಭೂಮಿ ಕೇಳಿದ ಈಶ ಫೌಂಡೇಶನ್‌ ಆದಿಯೋಗಿಯ ಪ್ರತಿಮೆಯನ್ನು ನಿರ್ಮಿಸಲು ಯೋಜಿಸಿದೆ. ಸಂಸ್ಥೆಯು ಚಿಕ್ಕಬಳ್ಳಾಪುರ, ಕೊಯಮತ್ತೂರು ಬಳಿಕ 3ನೇ ಪ್ರತಿಮೆ ನಿರ್ಮಿಸಲು ಚಿಂತಿಸಿದೆ.

ನೊಯ್ಡಾ: ಸದ್ಗುರು ನೇತೃತ್ವದ ಈಶ ಫೌಂಡೇಶನ್‌ ಇದೀಗ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ವಿಮಾನ ನಿಲ್ದಾಣದ ಬಳಿ ಬರೋಬ್ಬರಿ 242 ಅಡಿ ಎತ್ತರದ ಬೃಹತ್‌ ಆದಿಯೋಗಿ ಶಿವನ ಪ್ರತಿಮೆ ಸ್ಥಾಪಿಸಲು ಯೋಜಿಸಿದೆ. 

ಈ ಯೋಜನೆಗೆ ಈಗಾಗಲೇ ನಾಗರಿಕ ವಿಮಾನಯಾನ ಸಚಿವಾಲಯವು ಯೋಜನೆಗೆ ತಾತ್ವಿಕ ಅನುಮೋದನೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಮೆ ಸ್ಥಾಪನೆ ಅದಕ್ಕೆ ಸಂಬಂಧಿಸಿದ ಇತರ ಸೌಲಭ್ಯಗಳಿಗಾಗಿ ನೋಯ್ಡಾ ಸೆಕ್ಟರ್- 23ಡಿ ಯಲ್ಲಿನ ಅಮರಪುರ್ ಪಾಲಕಾ ಗ್ರಾಮದ ಬಳಿ ಒಟ್ಟು 200 ಎಕರೆ ಭೂಮಿಗಾಗಿ ಇಶಾ ಫೌಂಡೇಶನ್‌, ಸ್ಥಳೀಯ ಯಮುನಾ ಪ್ರಾಧಿಕಾರದ ಬಳಿ ವಿನಂತಿಸಿದೆ.

ಸದ್ಯ ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಕೇರಳದ ಕೊಯಮತ್ತೂರುಗಳಲ್ಲಿ ತಲಾ 1 ಸೇರಿ ಇಶಾ ಫೌಂಡೇಶನ್‌ ಎರಡು ಆದಿಯೋಗಿ ಪ್ರತಿಮೆ ಸ್ಥಾಪಿಸಿದೆ. 

ಇವು ಸ್ಥಳೀಯವಾಗಿ ಉತ್ತರ ಪ್ರವಾಸಿ ತಾಣಗಳಾಗಿ ಹೊರಹೊಮ್ಮಿವೆ. ಇವುಗಳ ಬಳಿ ಇಶಾ ನಿರ್ಮಾಣ ಮಾಡಲಿರುವ ಮೂರನೇ ಆದಿಯೋಗಿ ಪ್ರತಿಮೆ ಇದಾಗಿರಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ