ಉದ್ಯಮಿ ಗೌತಮ್‌ ಅದಾನಿ ಅವರ ಸಮೂಹ ಮೇಲಿನ ಸೌರ ವಿದ್ಯುತ್‌ ಹಗರಣ ಆರೋಪ :ಗದ್ದಲಕ್ಕೆ 2ನೇ ದಿನವೂ ಕಲಾಪ ಬಲಿ

KannadaprabhaNewsNetwork |  
Published : Nov 28, 2024, 12:34 AM ISTUpdated : Nov 28, 2024, 05:34 AM IST
ಅದಾನಿ | Kannada Prabha

ಸಾರಾಂಶ

ಉದ್ಯಮಿ ಗೌತಮ್‌ ಅದಾನಿ ಅವರ ಸಮೂಹ ಮೇಲಿನ ಸೌರ ವಿದ್ಯುತ್‌ ಹಗರಣ ಆರೋಪ ಹಾಗೂ ಸಂಭಲ್‌ ಕೋಮುಗಲಭೆ ಪ್ರಕರಣಗಳು ಸಂಸತ್‌ ಕಲಾಪವನ್ನು 2ನೇ ದಿನವೂ ಬಲಿಪಡೆದಿದೆ.

 ನವದೆಹಲಿ : ಉದ್ಯಮಿ ಗೌತಮ್‌ ಅದಾನಿ ಅವರ ಸಮೂಹ ಮೇಲಿನ ಸೌರ ವಿದ್ಯುತ್‌ ಹಗರಣ ಆರೋಪ ಹಾಗೂ ಸಂಭಲ್‌ ಕೋಮುಗಲಭೆ ಪ್ರಕರಣಗಳು ಸಂಸತ್‌ ಕಲಾಪವನ್ನು 2ನೇ ದಿನವೂ ಬಲಿಪಡೆದಿದೆ.

ಅದಾನಿ ಸಮೂಹದ ವಿರುದ್ಧದ ಆರೋಪಗಳನ್ನು ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸಬೇಕು ಹಾಗೂ ರೂಲ್ 267ರ ಪ್ರಕಾರ ಎಲ್ಲ ಇತರ ವಿಷಯಗಳನ್ನು ಬಿಟ್ಟು ತಕ್ಷಣವೇ ಅದಾನಿ ಹಗರಣದ ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ವಿಪಕ್ಷಗಳು ರಾಜ್ಯಸಭೆಯಲ್ಲಿ ಕೋರಿದವು. ಇದಕ್ಕೆ ಸ್ಪೀಕರ್ ಓಂಪ್ರಕಾಶ ಧನಕರ್‌ ಒಪ್ಪಲಿಲ್ಲ. ಆಗ ಕೋಲಾಹಲ ಜೋರಾಗಿ ದಿನದ ಮಟ್ಟಿಗೆ ಕಲಾಪ ಮುಂದೂಡಿಕೆ ಆಯಿತು,

ಇನ್ನು ಸಂಭಲ್‌ ಗಲಭೆ ಹಾಗೂ ಅದಾನಿ ಹಗರಣ ವಿಷಯ ಲೋಕಸಭೆಯಲ್ಲೂ ಪ್ರಸ್ತಾಪ ಆಗಿ ಈ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಆಗ್ರಹಿಸಿದವು. ಆಗ ಗದ್ದಲ ತೀವ್ರಗೊಂಡು ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

‘ಅದಾನಿ ಹಗರಣದ ಬಗ್ಗೆ ಚರ್ಚೆಗೆ ಸರ್ಕಾರ ಒಪ್ಪುತ್ತಿಲ್ಲ. ಸರ್ಕಾರದ ಮೊಂಡು ಹಟವೇ ಕಲಾಪ ಬಲಿ ಆಗಲು ಕಾರಣ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ