ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು ಇವಿಎಂಗಳಿಂದಲ್ಲ, ಕಳಪೆ ನಾಯಕತ್ವದಿಂದ : ಬಿಜೆಪಿ ವ್ಯಂಗ್ಯ

KannadaprabhaNewsNetwork |  
Published : Nov 28, 2024, 12:32 AM ISTUpdated : Nov 28, 2024, 05:36 AM IST
ಬಿಜೆಪಿ | Kannada Prabha

ಸಾರಾಂಶ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು ಇವಿಎಂಗಳಿಂದಲ್ಲ, ಕಾಂಗ್ರೆಸ್‌ನ ಕಳಪೆ ನಾಯಕತ್ವದಿಂದ.

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು ಇವಿಎಂಗಳಿಂದಲ್ಲ, ಕಾಂಗ್ರೆಸ್‌ನ ಕಳಪೆ ನಾಯಕತ್ವದಿಂದ. ಆದ್ದರಿಂದ ಮತಯಂತ್ರಗಳನ್ನು ಬದಲಿಸುವ ಬದಲು ರಾಹುಲ್‌ ಗಾಂಧಿ ನಾಯಕತ್ವವನ್ನು ಬದಲಿಸುವ ಯೋಚನೆ ಮಾಡಿ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿ ಸಲಹೆ ನೀಡಿದೆ.

ಇವಿಎಂ ರದ್ದು ಮಾಡಿ ಹಿಂದಿನಂತೆ ಬ್ಯಾಲೆಟ್‌ ಪೇಪರ್‌ ಮರುಜಾರಿ ಕುರಿತ ಖರ್ಗೆ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ, ‘ಇವಿಎಂಗಳಲ್ಲಿ ಸಮಸ್ಯೆಯಿಲ್ಲ, ಸಮಸ್ಯೆ ಇರುವುದೆಲ್ಲಾ ಕಾಂಗ್ರೆಸ್‌ ನಾಯಕತ್ವದಲ್ಲಿ. ಆದ್ದರಿಂದ ಮೊದಲು ರಾಹುಲ್‌ ಗಾಂಧಿ ನಾಯಕತ್ವವನ್ನು ಬದಲಿಸಿ. ಚುನಾವಣೆಯಲ್ಲಿ ನೀವು ಸೋಲಲು ರಾಹುಲ್‌ ಬೇಕಾರ್‌ (ಕಳಪೆ) ನಾಯಕತ್ವವೇ ಪ್ರಮುಖ ಕಾರಣ’ ಎಂದು ವ್ಯಂಗ್ಯವಾಡಿದ್ದಾರೆ.

ಜೊತೆಗೆ, ‘ನಿಮಗೆ ಮತ್ತು ರಾಹುಲ್‌ ಗಾಂಧಿ ಅವರಿಗೆ ಮೋದಿ ಸರ್ಕಾರ, ಮತಯಂತ್ರ, ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರೀಯ ತನಿಖಾ ದಳ (ಸಿಬಿಐ) ಬೇಡವೆಂದರೆ ನೀವು ದಯವಿಟ್ಟು ರಾಹುಲ್‌ ಗಾಂಧಿ ಅವರನ್ನು ಕರೆದುಕೊಂಡು ಮಂಗಳ ಗ್ರಹಕ್ಕೆ ಹೋಗಿಬಿಡಿ. ಅಲ್ಲಿ ಸಂತೋಷದಿಂದ ಜೀವನ ನಡೆಸಿ’ ಎಂದು ಖರ್ಗೆಗೆ ವ್ಯಂಗ್ಯವಾಗಿ ಟಾಂಗ್‌ ಕೊಟ್ಟಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ