ಕಾಶ್ಮೀರದ ಉಗ್ರರಿಗೆ ಹಣ: ರಾಜ್ಯದಲ್ಲಿ ಎನ್‌ಐಎ ಬೇಟೆ

Published : Sep 09, 2025, 06:31 AM IST
NIA arrests in Kolar prison radicalisation case

ಸಾರಾಂಶ

ದೇಶದ ಗಡಿ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯ ಸೃಷ್ಟಿಸಲು ಸದಾ ಹೊಂಚು ಹಾಕುವ ಉಗ್ರ ಜಾಲದ ಬೇಟೆಗೆ ರಾಷ್ಟ್ರೀಯ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಳಿದಿದ್ದು, ಕರ್ನಾಟಕ ಸೇರಿ 6 ರಾಜ್ಯಗಳ 22 ಕಡೆಗಳಲ್ಲಿ ಶೋಧ ನಡೆಸಿದೆ.

 ನವದೆಹಲಿ :  ದೇಶದ ಗಡಿ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯ ಸೃಷ್ಟಿಸಲು ಸದಾ ಹೊಂಚು ಹಾಕುವ ಉಗ್ರ ಜಾಲದ ಬೇಟೆಗೆ ರಾಷ್ಟ್ರೀಯ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಳಿದಿದ್ದು, ಕರ್ನಾಟಕ ಸೇರಿ 6 ರಾಜ್ಯಗಳ 22 ಕಡೆಗಳಲ್ಲಿ ಶೋಧ ನಡೆಸಿದೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದು, ನೇಮಕಾತಿ ಮತ್ತು ಗಡಿಯಾಚೆಗಿನ ನಿರ್ವಾಹಕರೊಂದಿಗೆ ಸಮನ್ವಯ ಸಾಧಿಸುವ ಪಿತೂರಿಯ ಪುರಾವೆಗಳನ್ನು ಬಹಿರಂಗಪಡಿಸುವುದು ಪ್ರಸ್ತುತ ದಾಳಿಗಳ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ 9 ಸ್ಥಳಗಳು, ಬಿಹಾರದ 8, ಉತ್ತರ ಪ್ರದೇಶದ 2, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡಿದ 1 ಕಡೆಗಳಲ್ಲಿ ಶೋಧ ಕೈಗೊಳ್ಳಲಾಗಿದೆ. ರಾಷ್ಟ್ರ ವಿರೋಧಿ ಜಾಲಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಗಳ ನಿವಾಸಗಳು ಮತ್ತು ಸಂಬಂಧಿತ ಸ್ಥಳಗಳಲ್ಲಿ ರಾಜ್ಯ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಜಮ್ಮು ಕಾಶ್ಮೀರದ ಬಾರಾಮುಲ್ಲಾ, ಕುಲ್ಗಾಂ, ಅನಂತನಾಗ್‌ ಮತ್ತು ಪುಲ್ವಾಮಾದಲ್ಲಿ ಶೋಧ ನಡೆದಿದೆ.

ಈ ವರ್ಷಾರಂಭದಲ್ಲಿ ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮಾಡಿದಾಗ ವಿಧ್ವಂಸಕ ಕೃತ್ಯದ ಸಂಚು ಬಯಲಾಗಿತ್ತು. ಆ ಜಾಲ ಇನ್ನಷ್ಟು ವ್ಯಾಪಿಸಿರುವ ಶಂಕೆ ಇದ್ದು ಅದನ್ನು ಬಯಲಿಗೆಳೆಯಲು ದಾಳಿ ನಡೆದಿದೆ.

ಕಾಶ್ಮೀರದ ಉಗ್ರರಿಗೆ ಹಣ: ರಾಜ್ಯದಲ್ಲಿ ಎನ್‌ಐಎ ಬೇಟೆ - 6 ರಾಜ್ಯಗಳಲ್ಲಿ 22 ಸ್ಥಳದಲ್ಲಿ ಏಕಕಾಲಕ್ಕೆ ದಾಳಿ - ಶಂಕಿತರ ನಿವಾಸಗಳು, ಸ್ಥಳಗಳ ಪರಿಶೀಲನೆ ವರ್ಷಾರಂಭದಲ್ಲಿ ಕಾಶ್ಮೀರದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದಾಗ ಉಗ್ರರ ವಿಧ್ವಂಸಕ ಕೃತ್ಯದ ಬಗ್ಗೆ ಎನ್‌ಎಐಗೆ ಮಹತ್ವದ ಸುಳಿವು

ಈ ಸುಳಿವು ಆಧರಿಸಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಯುಪಿ, ಕಾಶ್ಮೀರ, ಬಿಹಾರದ 22 ಸ್ಥಳಗಳ ಮೇಲೆ ಅಧಿಕಾರಿಗಳಿಂದ ದಾಳಿ ಉಗ್ರರಿಗೆ ಹಣ, ನೇಮಕ, ಗಡಿಯಾಚೆಗಿನ ನಿರ್ವಾಹಕರೊಂದಿಗೆ ಸಮನ್ವಯ ಸಾಧಿಸುವ ಪಿತೂರಿಯ ಪುರಾವೆ ಬಹಿರಂಗಕ್ಕೆ ಈ ಕಾರ್ಯಾಚರಣೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಶೀಘ್ರವೇ ಭಾರತದಲ್ಲೂ ಡೆಂಘೀ ಲಸಿಕೆ ಲಭ್ಯ
ಶೀಘ್ರ ಡೀಲ್‌ ಆಗದಿದ್ರೆ ಭೀಕರ ದಾಳಿ : ಟ್ರಂಪ್‌