ಜ್ಯೂಸ್‌ ಮೇಲಿನ ಒಆರೆಸ್‌ ಲೇಬಲ್‌ ತೆಗೀರಿ: ಕೇಂದ್ರ ಖಡಕ್‌ ಸೂಚನೆ

KannadaprabhaNewsNetwork |  
Published : Oct 19, 2025, 01:03 AM IST
ಒಆರ್‌ಎಸ್‌ | Kannada Prabha

ಸಾರಾಂಶ

ಆರೋಗ್ಯ ಹದಗೆಟ್ಟಾಗ ಅಥವಾ ದೇಹ ನಿರ್ಜಲೀಕರಣಗೊಂಡಾಗ ವೈದ್ಯರು ಮೊದಲು ಸೇವಿಸಲು ಸೂಚಿಸುವ ‘ಓಆರ್‌ಎಸ್‌’ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅ.14ರಂದು ಮಹತ್ವದ ಆದೇಶ ಹೊರಡಿಸಿದೆ. ಜ್ಯೂಸ್‌ ಹಾಗೂ ತಂಪುಪಾನೀಯ ಕಂಪನಿಯ ಯಾವುದೇ ಉತ್ಪನ್ನಗಳ ಮೇಲೆ ಓಆರ್‌ಎಸ್‌ ಎಂದು ಬರೆಯಬಾರದೆಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚಿಸಿದೆ. ಇದರೊಂದಿಗೆ ಈ ವಿಷಯದಲ್ಲಿ 8 ವರ್ಷಗಳಿಂದ ಏಕಾಂಗಿ ಹೋರಾಟಕ್ಕಿಳಿದಿದ್ದ ಡಾ। ಶಿವರಂಜಿನಿ ಸಂತೋಷ್‌ಗೆ ಜಯ ಸಿಕ್ಕಿದೆ.

ವೈದ್ಯೆಯ 8 ವರ್ಷದ ಹೋರಾಟಕ್ಕೆ ಕೊನೆಗೂ ಜಯ

ನವದೆಹಲಿ: ಆರೋಗ್ಯ ಹದಗೆಟ್ಟಾಗ ಅಥವಾ ದೇಹ ನಿರ್ಜಲೀಕರಣಗೊಂಡಾಗ ವೈದ್ಯರು ಮೊದಲು ಸೇವಿಸಲು ಸೂಚಿಸುವ ‘ಓಆರ್‌ಎಸ್‌’ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅ.14ರಂದು ಮಹತ್ವದ ಆದೇಶ ಹೊರಡಿಸಿದೆ.

ಜ್ಯೂಸ್‌ ಹಾಗೂ ತಂಪುಪಾನೀಯ ಕಂಪನಿಯ ಯಾವುದೇ ಉತ್ಪನ್ನಗಳ ಮೇಲೆ ಓಆರ್‌ಎಸ್‌ ಎಂದು ಬರೆಯಬಾರದೆಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚಿಸಿದೆ. ಇದರೊಂದಿಗೆ ಈ ವಿಷಯದಲ್ಲಿ 8 ವರ್ಷಗಳಿಂದ ಏಕಾಂಗಿ ಹೋರಾಟಕ್ಕಿಳಿದಿದ್ದ ಡಾ। ಶಿವರಂಜಿನಿ ಸಂತೋಷ್‌ಗೆ ಜಯ ಸಿಕ್ಕಿದೆ.

ಹಣ್ಣಿನ ರಸ, ಕಾರ್ಬೋನೇಟೆಡ್‌ ಅಲ್ಲದ ಪಾನೀಯಗಳ ಪ್ಯಾಕೆಟ್‌ಗಳ ಮೇಲೆ ಓಆರ್‌ಎಸ್‌ ಎಂದು ಬರೆಯುವುದು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ಉಲ್ಲಂಘನೆಯಾಗಿರುವ ಕಾರಣ ಓಆರ್‌ಎಸ್‌ ಎಂದು ಹೆಸರು, ಲೇಬಲ್‌ ಅಥವಾ ಟ್ರೇಡ್‌ಮಾರ್ಕ್‌ನಲ್ಲಿ ಉಲ್ಲೇಖಿಸಬಾರದು ಎಂದು ಆದೇಶಿಸಲಾಗಿದೆ.

ಅನೇಕ ಪಾನೀಯ ಕಂಪನಿಗಳು ತಯಾರಿಸುವ ಜ್ಯೂಸ್‌ಗಳ ಮೇಲೆಯೂ ಓಆರ್‌ಎಸ್‌ ಎಂದು ಬರೆದು ಕೊಳ್ಳುಗರ ದಾರಿತಪ್ಪಿಸುತ್ತಿವೆ. ಇದನ್ನು ನಿಲ್ಲಿಸುವ ಸಲುವಾಗಿ ಶಿವರಂಜಿನಿ ಅವರು ಕಳೆದ 8 ವರ್ಷಗಳಿಂದ ಒಬ್ಬಂಟಿಯಾಗಿ ಯತ್ನಿಸುತ್ತಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜ.27ಕ್ಕೆ ಬ್ಯಾಂಕ್‌ ಸಿಬ್ಬಂದಿಮುಷ್ಕರ: ಇಂದಿನಿಂದಲೇ4 ದಿನ ಸೇವೆ ವ್ಯತ್ಯಯ!
ಭೋಜಶಾಲಾದಲ್ಲಿ ಹಿಂದೂಗಳ ಪೂಜೆ, ಮುಸ್ಲಿಮರ ನಮಾಜ್‌!