ಹೈದರಾಬಾದ್: ತೆಲಂಗಾಣ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ಶೇ.42ರಷ್ಟು ಮೀಸಲಾತಿ ನೀಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ, ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರ ಹಿನ್ನೆಲೆಯಲ್ಲಿ ಶನಿವಾರ ತೆಲಂಗಾಣ ಬಂದ್ಗೆ ಕರೆ ನೀಡಲಾಗಿತ್ತು. ಬಂದ್ ಸಂಪೂರ್ಣ ಯಶಸ್ವಿಯಾಯಿತು. ಈ ವೇಳೆ ಕೆಲವು ಪ್ರತಿಭಟನಾಕಾರರು ಪೆಟ್ರೋಲ್ ಪಂಪ್ , ಕೆಲ ಅಂಗಡಿಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದರು.
==
ಜಾತಿಕಲಹ ನಿಲ್ಲದಿದ್ರೆ ಶೀಘ್ರ ಹಿಂದೂ ಗುರುತೇ ಮಾಯಅ.11ರಂದು ದಮೋಹ್ ಜಿಲ್ಲೆಯ ಒಬಿಸಿ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಎಐ ರಚಿತ ಮೀಮ್ ಹಂಚಿಕೊಂಡಿದ್ದಕ್ಕಾಗಿ, ಮೇಲ್ವರ್ಗದ ಜನರು ಅವನನ್ನು ನಿಂದಿಸಿದ್ದರು. ಅಲ್ಲದೆ, ಆತ ಇನ್ನೊಬ್ಬ ವ್ಯಕ್ತಿಯ ಪಾದವನ್ನು ತೊಳೆಯುವಂತೆ ಮಾಡಿದ್ದರು. ಈ ದೌರ್ಜನ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಕುರಿತು ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.ಅ.14ರಂದು ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾ. ಅತುಲ್ ಶ್ರೀಧರನ್ ಮತ್ತು ನ್ಯಾ. ಪ್ರದೀಪ್ ಮಿತ್ತಲ್ ಅವರ ಪೀಠ,
==
ಹೈದರಾಬಾದ್: ತಮ್ಮ ತಂದೆ ತಾಯಿಯನ್ನು ನೋಡಿಕೊಳ್ಳದೆ ನಿರ್ಲಕ್ಷಿಸುವ ಸರ್ಕಾರಿ ನೌಕರರ ಸಂಬಳವನ್ನು ಶೇ.10- 15ರಷ್ಟು ಕಡಿತಗೊಳಿಸಿ, ಅದನ್ನು ಪೋಷಕರಿಗೆ ನೀಡುವ ಕಾನೂನನ್ನು ಜಾರಿಗೆ ತರಲು ತೆಲಂಗಾಣ ಸರ್ಕಾರ ಚಿಂತನೆ ನಡೆಸಿದೆ.ಈ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾಹಿತಿ ನೀಡಿದ್ದು, ‘ ಒಂದು ವೇಳೆ ಸರ್ಕಾರಿ ನೌಕರರು ತಮ್ಮ ತಂದೆ- ತಾಯಿಯನ್ನು ನಿರ್ಲಕ್ಷಿಸಿದರೆ ಅವರ ಶೇ,10- 15ರಷ್ಟು ವೇತನವನ್ನು ಕಡಿತಗೊಳಿಸಿ ಅವರ ತಂದೆ- ತಾಯಿ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಲಾಗುತ್ತದೆ. ನೀವು ಶಾಸನ ರಚಿಸುವವರು. ನೀವು ತಿಂಗಳ ವೇತನ ಪಡೆಯುವಂತೆ ನಿಮ್ಮ ಹೆತ್ತವರೂ ಕೂಡ ಇದರಿಂದ ಮಾಸಿಕ ಆದಾಯ ಪಡೆಯುವುದನ್ನು ನಾವು ಖಚಿತ ಪಡಿಸಿಕೊಳ್ಳುತ್ತೇವೆ’ ಎಂದಿದ್ದಾರೆ. ಇದೇ ವೇಳೆ ಅವರು ಕಾಯ್ದೆ ರಚಿಸಲು ಅಧಿಕಾರಿಗಳ ಸಮಿತಿ ರಚಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.