ಉತ್ತರದವರು ಹಂದಿಗಳರೀತಿ ಮಕ್ಕಳ ಹೆರುತ್ತಾರೆ: ತ.ನಾಡು ಡಿಎಂಕೆ ಸಚಿವರೊಬ್ಬರ ವಿವಾದ

KannadaprabhaNewsNetwork |  
Published : Mar 14, 2025, 12:36 AM ISTUpdated : Mar 14, 2025, 05:16 AM IST
ದುರೈ | Kannada Prabha

ಸಾರಾಂಶ

ತಮಿಳುನಾಡಿನಲ್ಲಿ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಪಟ್ಟಂತೆ ವಾಗ್ವಾದಗಳು ಮತ್ತೊಂದು ಹಂತಕ್ಕೆ ತಲುಪಿದ್ದು, ಡಿಎಂಕೆ ಸಚಿವರೊಬ್ಬರು ತೀರಾ ಕೆಳಮಟ್ಟದ ಹೇಳಿಕೆ ನೀಡಿದ್ದಾರೆ.

ಚೆನ್ನೈ: ತಮಿಳುನಾಡಿನಲ್ಲಿ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಪಟ್ಟಂತೆ ವಾಗ್ವಾದಗಳು ಮತ್ತೊಂದು ಹಂತಕ್ಕೆ ತಲುಪಿದ್ದು, ಡಿಎಂಕೆ ಸಚಿವರೊಬ್ಬರು ತೀರಾ ಕೆಳಮಟ್ಟದ ಹೇಳಿಕೆ ನೀಡಿದ್ದಾರೆ. ‘ಉತ್ತರ ಭಾರತದವರು ಮಕ್ಕಳನ್ನು ಹಂದಿಗಳಂತೆ ಹೆರುತ್ತಾರೆ’ ಎಂದು ಹೇಳಿದ್ದಾರೆ.

ಸಭೆಯೊಂದರಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಜನರು ಸುಸಂಸ್ಕೃತರು. ನಾವು ಜನನ ಪ್ರಮಾಣದ ಮೇಲೆ ನಿಗಾ ಇರಿಸಿದ್ದೆವು. ಆದರೆ ಉತ್ತರ ಭಾರತದವರು ಹಂದಿಗಳಂತೆ ಮಕ್ಕಳನ್ನು ಹೆರುತ್ತಿದ್ದಾರೆ ಎಂದು ಹೇಳಿದ್ದಾರೆ. ಇವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ದಕ್ಷಿಣದ ರಾಜ್ಯದವರು 16 ಮಕ್ಕಳನ್ನು ಹೆರಬೇಕು, ಮದುವೆಯಾದ ಕೂಡಲೇ ಮಕ್ಕಳು ಹೆರಬೇಕು ಎಂಬ ಸಿಎಂ ಸ್ಟಾಲಿನ್‌ ಹೇಳಿಕೆ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್‌ ಅವರ ಅಭಿಪ್ರಾಯದ ಬೆನ್ನಲ್ಲೇ ಮತ್ತೋರ್ವ ಡಿಎಂಕೆ ನಾಯಕ ಜನಸಂಖ್ಯೆ ಬಗ್ಗೆ ಮಾತನಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ