ನವದೆಹಲಿ: ‘ಈಗಿನ ತಂತ್ರಜ್ಞಾನ ಯುಗದಲ್ಲಿಯೂ ನಾನು ಸ್ಮಾರ್ಟ್ಫೋನ್, ಇಂಟರ್ನೆಟ್ ಬಳಸುವುದಿಲ್ಲ’ ಎಂದು ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ದೋವಲ್, ‘ನಾನು ಸ್ಮಾರ್ಟ್ಫೋನ್, ಇಂಟರ್ನೆಟ್ ಬಳಸುವುದಿಲ್ಲ ಎಂಬ ವಿಷಯ ನಿಮಗೆ ಹೇಗೆ ತಿಳಿಯಿತು ಎಂಬುದು ನನಗೆ ಗೊತ್ತಿಲ್ಲ. ಆದರೆ ಅದು ಸತ್ಯ. ನಾನು ಆದಷ್ಟು ಫೋನ್, ಇಂಟರ್ನೆಟ್ ಬಳಸುವುದು ಕಡಿಮೆ. ಕೆಲವೊಮ್ಮೆ ಅನಿವಾರ್ಯವಾಗಿ ಬಳಸಬೇಕಾಗುತ್ತದೆ. ವಿದೇಶದಲ್ಲಿರುವವರ ಜೊತೆ ಸಂವಾದಕ್ಕೆ ಬೇಕಾಗುತ್ತದೆ. ಅದನ್ನು ಹೊರತುಪಡಿಸ ಸಂವಹನಕ್ಕೆ ನನಗೆ ಬೇರೆ ವ್ಯವಸ್ಥೆಗಳು ಇರುತ್ತವೆ. ಅದು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.
==ಶೀಘ್ರ ಅಲ್ ಫಲಾಹ್ ವಿವಿ ಇ.ಡಿ.ಯಿಂದ ಜಪ್ತಿ?
ದಿಲ್ಲಿ ಸ್ಫೋಟದ ಉಗ್ರರಾದ ಉಮರ್ ನಬಿ, ಮುಜಮ್ಮಿಲ್ ಶಕೀಲ್ ಗನೈ, ಆದುಕ್ ಅಹ್ಮದ್ ರಾಥರ್, ಮುಫ್ತಿ ಇರ್ಫಾನಿ ಸೇರಿ ಹಲವರು ಇಲ್ಲಿಯೇ ವೈದ್ಯರಾಗಿದ್ದರು.
==ಭಾರತೀಯ ಮೂಲದ ನಳಿನಿ ಜೋಶಿಗೆ ಆಸೀಸ್ ವರ್ಷದ ವಿಜ್ಞಾನಿ ಗೌರವ
ಸಿಡ್ನಿ: ಭಾರತೀಯ ಮೂಲದ ಗಣಿತಜ್ಞೆ ನಳಿನಿ ಜೋಶಿ ಅವರಿಗೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ವರ್ಷದ ವಿಜ್ಞಾನಿ ಎಂಬ ಗೌರವ ಸಂದಿದೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ರಾಜ್ಯದ ಅತ್ಯುನ್ನತ ವಿಜ್ಞಾನ ಗೌರವ ಪಡೆದ ಮೊದಲ ಗಣಿತಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅನ್ವಯಿಕ ಗಣಿತಶಾಸ್ತ್ರದಲ್ಲಿ ಅವರ ಪ್ರವರ್ತಕ ಕೆಲಸಕ್ಕಾಗಿ ಈ ಪ್ರಶಸ್ತಿ ಪ್ರಕಟಿಸಲಾಗಿದೆ. ಜೋಶಿ ಅವರ ಸಂಶೋಧನೆಯು ಫೈಬರ್-ಆಪ್ಟಿಕ್ ತಂತ್ರಜ್ಞಾನ, ರೇಖಾತ್ಮಕವಲ್ಲದ ಭೌತಶಾಸ್ತ್ರ ಮತ್ತು ಉದಯೋನ್ಮುಖ ಕ್ವಾಂಟಮ್ ವ್ಯವಸ್ಥೆಗಳಂತಹ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ರೂಪಿಸಲು ಸಹಾಯ ಮಾಡುತ್ತದೆ.ಪ್ರಸ್ತುತ ನಳಿನಿ ಜೋಶಿ ಅವರು ವಿಶ್ವದ ಪ್ರಮುಖ ಅನ್ವಯಿಕ ಗಣಿತಜ್ಞರಾಗಿದ್ದು, ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ,
==ಶಬರಿಮಲೆ ಚಿನ್ನ ಕೇಸು: ತಟಸ್ಥ ಸಂಸ್ಥೆ ತನಿಖೆಗೆ ಅಮಿತ್ ಶಾ ಆಗ್ರಹ
ಕೇರಳ ಎಸ್ಐಟಿ ತನಿಖೆ ನಿಷ್ಪಕ್ಷಪಾತವಾಗಿಲ್ಲಘಟನೆ ಬಗ್ಗೆ ಅಮಿತ್ ಶಾ ಮೊದಲ ಮಾತು
ತಿರುವನಂತಪುರ: ಶಬರಿಮಲೆ ದ್ವಾರಪಾಲಕ ವಿಗ್ರಹ ಮತ್ತು ಗರ್ಭಗುಡಿ ಬಾಗಿಲಿನಲ್ಲಿನ ಚಿನ್ನ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಮಿತ್ ಶಾ ಮೊದಲ ಬಾರಿಗೆ ಮಾತನಾಡಿದ್ದಾರೆ. ತನಿಖೆಯನ್ನು ಕೇರಳ ಎಸ್ಐಟಿ ಬದಲು ತಟಸ್ಥ ತನಿಖಾ ಸಂಸ್ಥೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.ಭಾನುವಾರ ಅನಂತ ಪದ್ಮನಾಭ ಸ್ವಾಮಿ ದೇಗುಲಕ್ಕೆ ಭೇಟಿ ಕೊಟ್ಟು ನಂತರ ಬಿಜೆಪಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಶಬರಿಮಲೆಯ ಆಸ್ತಿಯನ್ನು ರಕ್ಷಿಸಲಾಗದವರು ಭಕ್ತರ ನಂಬಿಕೆಯನ್ನು ಹೇಗೆ ರಕ್ಷಿಸುವರು’ ಎಂದು ಕೇರಳ ಎಡರಂಗ ಸರ್ಕಾರಕ್ಕೆ ಚಾಟಿ ಬೀಸಿದರು.
‘ಜನರ ನಂಬಿಕೆಗಳಿಗೆ ಗೌರವಿಸುವುದೆಂದರೆ ಅದುವೇ ಬಿಜೆಪಿ ಸರ್ಕಾರ. ಕೇರಳ ಸರ್ಕಾರದ ಎಫ್ಐಆರ್ ಓದಿದ್ದೇನೆ. ಅದರಲ್ಲಿ ತಮ್ಮವರನ್ನು ರಕ್ಷಿಸಿಕೊಳ್ಳುವ ಉದ್ದೇವಿದೆಯೇ ಹೊರತು, ಸತ್ಯ ಹೊರತರುವ ಉದ್ದೇಶವಿಲ್ಲ. ಶಬರಿಮಲೆಗೆ ನ್ಯಾಯ ಒದಗಿಸಬೇಕಾದರೆ, ತನಿಖೆಯನ್ನು ನಿಷ್ಪಕ್ಷಪಾತ ಸಂಸ್ಥೆಗೆ ಕೊಡಬೇಕು’ ಎಂದು ಸಿಎಂ ಪಿಣರಾಯಿ ವಿಜಯನ್ರನ್ನು ಆಗ್ರಹಿಸಿದರು.ಜೊತೆಗೆ ನ್ಯಾಯಕ್ಕಾಗಿ ಬಿಜೆಪಿಯು ಮನೆ ಮನೆಗೆ ತೆರಳಿ ಅರಿವು ಮೂಡಿಸುತ್ತದೆ ಎಂದರು.