ಉದ್ಧವ್ ಠಾಕ್ರೆ ಬಣದ ಶಿವಸೇನೆಯಿಂದ ಬಂಡಾಯವೆದ್ದಿದ್ದ 6 ಸಂಸದರು ಸೋಮವಾರ ಅಧಿಕೃತವಾಗಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ 2022ರಲ್ಲಿ ಏಕನಾಥ್ ಶಿಂಧೆ ಬಂಡಾಯದಿಂದ ಹೋಳಾಗಿದ್ದ ಠಾಕ್ರೆ ಪಕ್ಷ 2ನೇ ಬಾರಿ ವಿಭಜನೆ ಆದಂತಾಗಿದೆ. ಪರಿಣಾಮ ಅದರ ಬಳಿಕ ಇದೀಗ ಕೇವಲ 3 ಸಂಸದರು ಉಳಿದುಕೊಂಡಿದ್ದಾರೆ.
ಠಾಕ್ರೆ ಬಣದಲ್ಲೀಗ ಕೇವಲ 3 ಸಂಸದರು
ಆಪರೇಷನ್ ಟೈಗರ್ ಈಗ ಪೂರ್ಣ: ಶಿಂಧೆ
2022ರ ಬಳಿಕ ಮತ್ತೊಮ್ಮೆ ಸೇನೆ ಹೋಳು
ಲೋಕಸಬೇಲಿ ಎನ್ಡಿಎ ಬಲ 324ಕ್ಕೆ ಏರಿಕೆಪಿಟಿಐ ಮುಂಬೈ
ಉದ್ಧವ್ ಠಾಕ್ರೆ ಬಣದ ಶಿವಸೇನೆಯಿಂದ ಬಂಡಾಯವೆದ್ದಿದ್ದ 6 ಸಂಸದರು ಸೋಮವಾರ ಅಧಿಕೃತವಾಗಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ 2022ರಲ್ಲಿ ಏಕನಾಥ್ ಶಿಂಧೆ ಬಂಡಾಯದಿಂದ ಹೋಳಾಗಿದ್ದ ಠಾಕ್ರೆ ಪಕ್ಷ 2ನೇ ಬಾರಿ ವಿಭಜನೆ ಆದಂತಾಗಿದೆ. ಪರಿಣಾಮ ಅದರ ಬಳಿಕ ಇದೀಗ ಕೇವಲ 3 ಸಂಸದರು ಉಳಿದುಕೊಂಡಿದ್ದಾರೆ.
ಸೋಮವಾರ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಅತೃಪ್ತ ಸಂಸದರಾದ ಸಂಜಯ್ ದೇಶಮುಖ್, ಸಂಜಯ್ ಜಾಧವ್, ಸಂಜಯ್ ದೀನ ಪಾಟೀಲ್, ನಾಗೇಶ್ ಅಷ್ಟಿಕರ್ ಹಾಗೂ ಓಂಪ್ರಕಾಶ್ ರಾಜೇನಿಂಬಾಳ್ಕರ್ ಶಿವಸೇನೆ ಸೇರ್ಪಡೆಯಾದರು.
ಆಪರೇಷನ್ ಟೈಗರ್ ಯಶಸ್ವಿ:
ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಮುಖ್ಯಸ್ಥ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ‘ಆಪರೇಷನ್ ಟೈಗರ್ ಯಶಸ್ವಿಯಾಗಿದೆ. ಈ ಸಂಸದರು ದಿ. ಬಾಳಾಸಾಹೇಬ್ ಠಾಕ್ರೆ ಅವರ ಬೋಧನೆ ಅನುಸರಿಸುವ ಮೂಲ ಶಿವಸೇನೆಗೆ ಸೇರಿದ್ದಾರೆ. ಠಾಕ್ರೆಯವರ ತತ್ವಗಳನ್ನು ಮತ್ತು ಶಿವಸೇನೆಯನ್ನು ಉಳಿಸಲು ನಾನು ಇದನ್ನು ಮೊದಲೇ ಮಾಡಿದ್ದೆ. ಈಗ, ಸಿಕ್ಸರ್ ಹೊಡೆದಿದ್ದೇನೆ. ಈ ನಡೆ ಶಿವಸೇನೆ ವಿಸ್ತರಣೆಯ 2ನೇ ಹಂತವಾಗಿದೆ. ನಾವೆಲ್ಲ 2029ರ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯ ಮೂಲಕ ಗೆಲುವು ಸಾಧಿಸಲಿದ್ದೇವೆ’ ಎಂದು ಘೋಷಿಸಿದರು.
ಎನ್ಡಿಎ ಬಲ 324ಕ್ಕೆ ಏರಿಕೆ:
ಇತ್ತೀಚೆಗೆ ಟಿಎಂಸಿಯ 20 ಸಂಸದರು ಬಂಡಾಯ ಎದ್ದು ಎನ್ಡಿಎ ಬೆಂಬಲಿಸಿದ್ದಾರೆ. ಈಗ ಶಿವಸೇನೆಯ (ಯುಬಿಟಿ) 6 ಸಂಸದರೂ ಎನ್ಡಿಎ ಮೈತ್ರಿಕೂಟ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಲೋಕಸಭೆಯಲ್ಲಿ ಎನ್ಡಿಎ ಬಲ 298ರಿಂದ 324ಕ್ಕೆ ಏರಿದೆ. 543 ಸದಸ್ಯಬಲದ ಸದನದಲ್ಲಿ 2/3ರಷ್ಟು ಬಹುಮತಕ್ಕೆ 362 ಸೀಟು ಬೇಕು. ಹೀಗಾಗಿ ಇನ್ನೂ 38 ಸದಸ್ಯರ ಕೊರತೆ ಬೀಳಲಿದೆ. 2/3ರಷ್ಟು ಬಹುಮತವು ಮಹಿಳಾ ಮೀಸಲು ಸೇರಿದಂತೆ ಸಾಂವಿಧಾನಿಕ ಮಸೂದೆಗಳ ಅಂಗೀಕಾರಕ್ಕೆ ಅಗತ್ಯ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.