ಜೈಲಲ್ಲಿರುವ ರಶೀದ್‌, ಅಮೃತ್‌ ಪಾಲ್‌ ಸಂಸದರಾಗಿ ಶಪಥ

KannadaprabhaNewsNetwork |  
Published : Jul 06, 2024, 12:57 AM ISTUpdated : Jul 06, 2024, 06:36 AM IST
parliament

ಸಾರಾಂಶ

ಉಗ್ರವಾದ ಕೇಸಿನಲ್ಲಿ ದಿಲ್ಲಿಯ ತಿಹಾರ್‌ ಜೈಲಿನಲ್ಲಿರುವ ಎಂಜಿನಿಯರ್ ರಶೀದ್‌ ಅಲಿಯಾಸ್‌ ಶೇಖ್ ಅಬ್ದುಲ್ ರಶೀದ್‌ ಹಾಗೂ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರುವ ಖಲಿಸ್ತಾನಿ ಪರ ಪ್ರಚಾರಕ ಹಾಗೂ ನಿಯೋಜಿತ ಸಂಸದ ಅಮೃತ್‌ಪಾಲ್‌ ಸಿಂಗ್‌ ಶುಕ್ರವಾರ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ನವದೆಹಲಿ: ಉಗ್ರವಾದ ಕೇಸಿನಲ್ಲಿ ದಿಲ್ಲಿಯ ತಿಹಾರ್‌ ಜೈಲಿನಲ್ಲಿರುವ ಎಂಜಿನಿಯರ್ ರಶೀದ್‌ ಅಲಿಯಾಸ್‌ ಶೇಖ್ ಅಬ್ದುಲ್ ರಶೀದ್‌ ಹಾಗೂ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರುವ ಖಲಿಸ್ತಾನಿ ಪರ ಪ್ರಚಾರಕ ಹಾಗೂ ನಿಯೋಜಿತ ಸಂಸದ ಅಮೃತ್‌ಪಾಲ್‌ ಸಿಂಗ್‌ ಶುಕ್ರವಾರ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ಉಗ್ರವಾದದ ಕೇಸಲ್ಲಿ ಬಂಧಿತರಾಗಿರುವ ರಶೀದ್‌ ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಜೈಲಿಂದಲೇ ಸ್ಪರ್ಧಿಸಿದ್ದರು ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು. ಅವರಿಗೆ ಪ್ರಮಾಣವಚನ ಸ್ವೀಕರಿಸಲು ದಿಲ್ಲಿ ಕೋರ್ಟು 2 ತಾಸು ಕಸ್ಟಡಿ ಪೆರೋಲ್‌ ನೀಡಿತ್ತು.

ಅದೇ ರೀತಿ ಅಮೃತ್‌ಪಾಲ್‌ ಪಂಜಾಬ್‌ನ ಖಾದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರಿಗೂ ಕೋರ್ಟ್‌ ನಾಲ್ಕು ದಿನಗಳ ಪೆರೋಲ್‌ ನೀಡಿತ್ತು.

ಇವರು ಪ್ರಮಾಣವಚನ ಸ್ವೀಕಾರಕ್ಕೆ ಬಂದಾಗ ಸಂಸತ್ತಿನ ಆವರಣ ಹಾಗೂ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ