ಕಾಸರಗೋಡಿನ ನೀಲೇಶ್ವರದ ದೇಗುಲವೊಂದರಲ್ಲಿ ತೆಯ್ಯಂ ಪ್ರದರ್ಶನ ವೇಳೆ ಪಟಾಕಿ ದುರಂತ : 150 ಜನಕ್ಕೆ ಗಾಯ

KannadaprabhaNewsNetwork |  
Published : Oct 30, 2024, 12:43 AM ISTUpdated : Oct 30, 2024, 06:25 AM IST
ಕಾಸರಗೋಡು | Kannada Prabha

ಸಾರಾಂಶ

ತೆಯ್ಯಂ ಪ್ರದರ್ಶನ ವೇಳೆ ಪಟಾಕಿ ದುರಂತ ಸಂಭವಿಸಿ 150 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ದೇಗುಲವೊಂದರಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ

 ಕಾಸರಗೋಡು :  ತೆಯ್ಯಂ ಪ್ರದರ್ಶನ ವೇಳೆ ಪಟಾಕಿ ದುರಂತ ಸಂಭವಿಸಿ 150 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ದೇಗುಲವೊಂದರಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಈ ಪೈಕಿ 10 ಮಂದಿಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀಲೇಶ್ವರ ಬಳಿ ಇರುವ ವೀರರ್‌ಕಾವು ದೇಗುಲದಲ್ಲಿ ಈ ಘಟನೆ ನಡೆದಿದೆ. ತೆಯ್ಯಂ ಪ್ರದರ್ಶನ ವೇಳೆ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ವೇಳೆ ಪಟಾಕಿ ಸಿಡಿಸಲಾಗುತ್ತಿತ್ತು. ಆಗ ಪಟಾಕಿ ಕಿಡಿ, ಉತ್ಸವಕ್ಕಾಗಿ ತಂದು ಶೇಖರಿಸಿಡಲಾಗಿದ್ದ ಅಪಾರ ಪ್ರಮಾಣದ ಪಟಾಕಿ ದಾಸ್ತಾನಿನ ಮೇಲೆ ಬಿತ್ತು. ನೋಡನೋಡುತ್ತಿದ್ದಂತೆ ಸ್ಫೋಟ ಹಾಗೂ ಬೆಂಕಿ ಸಂಭವಿಸಿ ಜನ ದಿಕ್ಕಾಪಾಲಾಗಿ ಓಡುವಂತಾಯಿತು. ಈ ವೇಳೆ 150 ಮಂದಿ ಗಾಯಗೊಂಡರು. ಆ ಪೈಕಿ 108 ಮಂದಿಯನ್ನು ಕಾಸರಗೋಡು, ಕಣ್ಣೂರು, ಕೋಳಿಕೋಡ್‌ ಹಾಗೂ ನೆರೆಯ ಮಂಗಳೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ನೀಡಿ ಪೊಲೀಸರು ದೇಗುಲದ 8 ಮಂದಿ ಅಧಿಕಾರಿಗಳ ವಿರುದ್ಧ ಸ್ಫೋಟ ವಸ್ತು ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ಖರ್ಗೆ ಹೆಗಲಿಗೆ ನಿರ್ಧಾರ ಯಾರು ಆಗ್ತಾರೆ ಕೇರಳಂ ಸಿಎಂ?
ಪಶ್ಚಿಮ ಬಂಗಾಳ ವಿಧಾನಸಭೆ ವಿರ್ಸಜನೆ ಗೌರ್‍ನರ್‌ ಗೇಟ್‌ ಪಾಸ್‌ : ದೀದಿ ಈಗ ಬೀದಿಗೆ!