ನವದೆಹಲಿ: ಕೇಂದ್ರ ಸರ್ಕಾರ ಪ್ರತಿವರ್ಷ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳವಾರ ದೆಹಲಿಯಲ್ಲಿ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ ಬಾರಿಯ ವಿಶೇಷವೆಂದರೆ ದಕ್ಷಿಣ ಚಿತ್ರರಂಗದ ಕಲಾವಿದರೇ ಹೆಚ್ಚಿನ ಪ್ರಶಸ್ತಿಯನ್ನು ಬಾಚಿಕೊಂಡರು.
ಪ್ರಶಸ್ತಿ ಗೆದ್ದ ಪ್ರಮುಖರು:
ರಿಷಬ್ ಶೆಟ್ಟಿ (ಅತ್ಯುತ್ತಮ ನಟ), ನಿತ್ಯಾ ಮೆನನ್, ಮಾನಸಿ ಪಾರೇಖ್ (ಅತ್ಯುತ್ತಮ ನಟಿ) , ನೀನಾ ಗುಪ್ತಾ (ಅತ್ಯುತ್ತಮ ಸಹ ನಟಿ), ಸೂರಜ್ ಬಾರ್ಜತ್ಯ (ಅತ್ಯುತ್ತಮ ನಿರ್ದೇಶಕ) ಎ.ಆರ್.ರೆಹಮಾನ್ ( ಅತ್ಯುತ್ತಮ ಹಿನ್ನೆಲೆ ಸಂಗೀತ ನಿರ್ದೇಶಕ). ಪ್ರೀತಂ (ಅತ್ಯುತ್ತಮ ಸಂಗೀತ ನಿರ್ದೇಶಕ) ಅರಿಜಿತ್ ಸಿಂಗ್ (ಅತ್ಯುತ್ತಮ ಗಾಯಕ), ಜಯಶ್ರೀ (ಅತ್ಯುತ್ತಮ ಗಾಯಕಿ ಪ್ರಶಸ್ತಿ) ಯನ್ನು ಗೆದ್ದಿದ್ದಾರೆ. ಮಲಯಾಳಂನ ಅಟ್ಟಂ ಸಿನಿಮಾ ಅತ್ಯುತ್ತಮ ಚಿತ್ರಕತೆ ಹಾಗೂ ಅತ್ಯುತ್ತಮ ಸಂಕಲನ ಪ್ರಶಸ್ತಿ ಪಡೆದಿದೆ.