ಪೈಲಟ್ ಸಮಯಪ್ರಜ್ಞೆಯಿಂದ 2000 ಜನರ ಜೀವ ಬಚಾವ್‌!

Published : Jun 14, 2025, 06:02 AM IST
Debris of the Air India plane crash

ಸಾರಾಂಶ

ಗುರುವಾರ ಪತನವಾದ ಏರ್ ಇಂಡಿಯಾ ವಿಮಾನ ಮನೆಗಳಿಗೆ ತೀರಾ ಸಮೀಪದಲ್ಲಿ ಹಾದುಹೋಗಿತ್ತು. ಪೈಲಟ್ ಸಮಯಪ್ರಜ್ಞೆ ತೋರಿದ್ದರಿಂದ ವಸತಿ ಪ್ರದೇಶದಲ್ಲಿದ್ದ ಸುಮಾರು 1,500ರಿಂದ 2,000 ಜನರ ಪ್ರಾಣ ಉಳಿಯಿತು

ಅಹಮದಾಬಾದ್: ಗುರುವಾರ ಪತನವಾದ ಏರ್ ಇಂಡಿಯಾ ವಿಮಾನ ಮನೆಗಳಿಗೆ ತೀರಾ ಸಮೀಪದಲ್ಲಿ ಹಾದುಹೋಗಿತ್ತು. ಪೈಲಟ್ ಸಮಯಪ್ರಜ್ಞೆ ತೋರಿದ್ದರಿಂದ ವಸತಿ ಪ್ರದೇಶದಲ್ಲಿದ್ದ ಸುಮಾರು 1,500ರಿಂದ 2,000 ಜನರ ಪ್ರಾಣ ಉಳಿಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

‘ವಿಮಾನ ಪತನವಾಗುವಾಗ ನಾವು ಕ್ರಿಕೆಟ್ ಆಡುತ್ತಿದ್ದೆವು. ವಿಮಾನ ನಮ್ಮ ಮೇಲೆ ತೀರಾ ಹತ್ತಿರದಿಂದ ಹಾದುಹೋಯಿತು. ಅವಘಡದ ಸದ್ದು ಕೇಳಿ, ಸ್ಥಳಕ್ಕೆ ಓಡಿದೆವು. ಸುಮಾರು 15-20 ಜನರ ರಕ್ಷಣೆಗೆ ಯತ್ನಿಸಿದೆವು.

ಸಾಮಾನ್ಯವಾಗಿ ವಿಮಾನಗಳು ಎತ್ತರದಲ್ಲಿ ಹಾರಾಡುತ್ತವೆ. ಆದರೆ ಈ ವಿಮಾನ ಅಪಾಯಕಾರಿಯಾಗಿ ಮನೆಗಳಿಗೆ ಸಮೀಪದಲ್ಲೇ ಹಾದುಹೋಯಿತು. ಪೈಲಟ್ ವಸತಿ ಪ್ರದೇಶದಿಂದ ವಿಮಾನವನ್ನು ಬೇರೆಡೆ ತಿರುಗಿಸಿ ಸುಮಾರು 1,500ರಿಂದ 2,000 ಜನರ ಪ್ರಾಣ ಉಳಿಸಿದ್ದಾರೆ. ಅವರಿಗೆ ಸೆಲ್ಯೂಟ್’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ