ಪೈಲಟ್ ಸಮಯಪ್ರಜ್ಞೆಯಿಂದ 2000 ಜನರ ಜೀವ ಬಚಾವ್‌!

Published : Jun 14, 2025, 06:02 AM IST
Debris of the Air India plane crash

ಸಾರಾಂಶ

ಗುರುವಾರ ಪತನವಾದ ಏರ್ ಇಂಡಿಯಾ ವಿಮಾನ ಮನೆಗಳಿಗೆ ತೀರಾ ಸಮೀಪದಲ್ಲಿ ಹಾದುಹೋಗಿತ್ತು. ಪೈಲಟ್ ಸಮಯಪ್ರಜ್ಞೆ ತೋರಿದ್ದರಿಂದ ವಸತಿ ಪ್ರದೇಶದಲ್ಲಿದ್ದ ಸುಮಾರು 1,500ರಿಂದ 2,000 ಜನರ ಪ್ರಾಣ ಉಳಿಯಿತು

ಅಹಮದಾಬಾದ್: ಗುರುವಾರ ಪತನವಾದ ಏರ್ ಇಂಡಿಯಾ ವಿಮಾನ ಮನೆಗಳಿಗೆ ತೀರಾ ಸಮೀಪದಲ್ಲಿ ಹಾದುಹೋಗಿತ್ತು. ಪೈಲಟ್ ಸಮಯಪ್ರಜ್ಞೆ ತೋರಿದ್ದರಿಂದ ವಸತಿ ಪ್ರದೇಶದಲ್ಲಿದ್ದ ಸುಮಾರು 1,500ರಿಂದ 2,000 ಜನರ ಪ್ರಾಣ ಉಳಿಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

‘ವಿಮಾನ ಪತನವಾಗುವಾಗ ನಾವು ಕ್ರಿಕೆಟ್ ಆಡುತ್ತಿದ್ದೆವು. ವಿಮಾನ ನಮ್ಮ ಮೇಲೆ ತೀರಾ ಹತ್ತಿರದಿಂದ ಹಾದುಹೋಯಿತು. ಅವಘಡದ ಸದ್ದು ಕೇಳಿ, ಸ್ಥಳಕ್ಕೆ ಓಡಿದೆವು. ಸುಮಾರು 15-20 ಜನರ ರಕ್ಷಣೆಗೆ ಯತ್ನಿಸಿದೆವು.

ಸಾಮಾನ್ಯವಾಗಿ ವಿಮಾನಗಳು ಎತ್ತರದಲ್ಲಿ ಹಾರಾಡುತ್ತವೆ. ಆದರೆ ಈ ವಿಮಾನ ಅಪಾಯಕಾರಿಯಾಗಿ ಮನೆಗಳಿಗೆ ಸಮೀಪದಲ್ಲೇ ಹಾದುಹೋಯಿತು. ಪೈಲಟ್ ವಸತಿ ಪ್ರದೇಶದಿಂದ ವಿಮಾನವನ್ನು ಬೇರೆಡೆ ತಿರುಗಿಸಿ ಸುಮಾರು 1,500ರಿಂದ 2,000 ಜನರ ಪ್ರಾಣ ಉಳಿಸಿದ್ದಾರೆ. ಅವರಿಗೆ ಸೆಲ್ಯೂಟ್’ ಎಂದಿದ್ದಾರೆ.

PREV
Read more Articles on

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ