ದೇಶದ ಅತಿವೇಗದ ಮೆಟ್ರೋ ರೈಲು, ನಮೋ ಭಾರತ್‌ಗೆ ಮೋದಿ ಚಾಲನೆ

KannadaprabhaNewsNetwork |  
Published : Feb 23, 2026, 01:45 AM IST
ಮೋದಿ | Kannada Prabha

ಸಾರಾಂಶ

ದೇಶದ ಅತಿ ವೇಗದ ಮೆಟ್ರೋ ಹಾಗೂ ನಮೋ ಭಾರತ್‌ ಪ್ರಾದೇಶಿಕ ತ್ವರಿತಗತಿ ಸಾರಿಗೆ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಉದ್ಘಾಟಿಸಿದರು. ಒಂದೇ ಹಳಿಯ ಮೇಲೆ ಮೆಟ್ರೋ ಮತ್ತು ರ್‍ಯಾಪಿಡ್‌ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಮೊದಲ ಉದಾಹರಣೆ ಇದಾಗಿದೆ. ಈ ವೇಳೆ ಮೆಟ್ರೋ ರೈಲಲ್ಲಿ ಸಂಚರಿಸಿದ ಮೋದಿ ವಿದ್ಯಾರ್ಥಿಗಳು, ಅಧಿಕಾರಿಗಳ ಜತೆ ಸಂವಾದ ನಡೆಸಿದರು.

- ಮೇರಠ್‌ನಲ್ಲಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಮೆಟ್ರೋ ಸಂಚಾರ

- ಒಂದೇ ಹಳಿ ಮೇಲೆ ಮೆಟ್ರೋ, ರ್‍ಯಾಪಿಡ್‌ ರೈಲು: ದೇಶದಲ್ಲೇ ಮೊದಲುಮೇರಠ್‌: ದೇಶದ ಅತಿ ವೇಗದ ಮೆಟ್ರೋ ಹಾಗೂ ನಮೋ ಭಾರತ್‌ ಪ್ರಾದೇಶಿಕ ತ್ವರಿತಗತಿ ಸಾರಿಗೆ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಉದ್ಘಾಟಿಸಿದರು. ಒಂದೇ ಹಳಿಯ ಮೇಲೆ ಮೆಟ್ರೋ ಮತ್ತು ರ್‍ಯಾಪಿಡ್‌ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಮೊದಲ ಉದಾಹರಣೆ ಇದಾಗಿದೆ. ಈ ವೇಳೆ ಮೆಟ್ರೋ ರೈಲಲ್ಲಿ ಸಂಚರಿಸಿದ ಮೋದಿ ವಿದ್ಯಾರ್ಥಿಗಳು, ಅಧಿಕಾರಿಗಳ ಜತೆ ಸಂವಾದ ನಡೆಸಿದರು.

ಆ ಬಳಿಕ 12, 930 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದ ಮೋದಿ, ನಮ್ಮ ಸರ್ಕಾರ ಇದೀಗ ಉದ್ಘಾಟಿಸಿದ ಯೋಜನೆಗಳು ವಿಕಸಿತ ಉತ್ತರ ಪ್ರದೇಶ ಮತ್ತು ವಿಕಸಿತ ಭಾರತಕ್ಕೆ ಹೆಚ್ಚಿನ ಬಲ ನೀಡುತ್ತವೆ. ಈ ಯೋಜನೆಗಳು ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಕೆಲಸದ ಸಂಸ್ಕೃತಿಯನ್ನು ತೋರಿಸುತ್ತದೆ. ನಮ್ಮ ಸರ್ಕಾರ ಯಾವುದೇ ಯೋಜನೆಯನ್ನು ನಿಗದಿತ ಸಮಯದಲ್ಲಿ ಮುಗಿಸಲು ಬದ್ಧವಾಗಿದೆ ಎಂದರು.

120 ಕಿ.ಮೀ. ವೇಗದ ಮೆಟ್ರೋ:

ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸುವ 23 ಕಿ.ಮೀ. ಉದ್ದದ ಮೇರಠ್‌ ಮೆಟ್ರೋ ದೇಶದ ಅತಿವೇಗದ ಮೆಟ್ರೋ ಎಂಬ ಹಿರಿಮೆಗೆ ಪಾತ್ರವಾಗಿದೆ. ದಕ್ಷಿಣ ಮೇರಠ್‌ ಮತ್ತು ಮೋದಿಪುರಂ ನಡುವೆ ಈ ರೈಲು ಸಂಚರಿಸಲಿದೆ.

ನಮೋ ಭಾರತ್‌:

ನಮೋ ಭಾರತ್‌ ಕಾರಿಡಾರ್‌ ದೆಹಲಿ - ಗಾಝಿಯಾಬಾದ್‌ - ಮೇರಠ್‌ ಸಂಪರ್ಕಿಸುವ ದೇಶದ ಮೊದಲ ಪ್ರಾದೇಶಿಕ ತ್ವರಿತಗತಿಯ ಸಾರಿಗೆ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಡಿ ಈಗಾಗಲೇ ಕೆಲವು ಮಾರ್ಗ ಉದ್ಘಾಟನೆಗೊಂಡಿದ್ದು, ಬಾಕಿ ಉಳಿದಿದ್ದ ದೆಹಲಿಯ ಸರಾಯಿ ಕಾಲೆ ಖಾನ್‌ ಮತ್ತು ನ್ಯೂ ಅಶೋಕ್‌ ನಗರ ನಡುವಿನ 5 ಕಿ.ಮೀ. ಮತ್ತು ಉತ್ತರ ಪ್ರದೇಶದ ದಕ್ಷಿಣ ಮೇರಠ್‌ ಮತ್ತು ಮೋದಿಪುರಂ ನಡುವಿನ 21 ಕಿ.ಮೀ. ಮಾರ್ಗಕ್ಕೆ ಚಾಲನೆ ನೀಡಿದರು. ಈ ಮೂಲಕ ದೆಹಲಿ ಮತ್ತು ಮೇರಠ್‌ ನಡುವಿನ ಸಂಪೂರ್ಣ ಕಾರಿಡಾರ್‌ ಉದ್ಘಾಟನೆಗೊಂಡಂತಾಗಿದೆ. ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸುವ ಈ 82 ಕಿ.ಮೀ. ಉದ್ದದ ನಮೋ ಭಾರತ್‌ ತ್ವರಿತಗತಿ ಸಾರಿಗೆಯು ಪ್ರಮುಖ ನಗರ ಕೇಂದ್ರಗಳಾದ ಸಾಹಿಬಾಬಾದ್‌, ಗಾಝಿಯಾಬಾದ್‌, ಮೋದಿನಗರ್‌ ಮತ್ತು ಮೀರತ್‌ ಅನ್ನು ದೆಹಲಿಯೊಂದಿಗೆ ಸಂಪರ್ಕಿಸುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ ಇಂಡಿಯ ಲಿಂಬೆಕಾಯಿ ಬಗ್ಗೆ ಪ್ರಧಾನಿ ಮೋದಿ ಫಿದಾ
ಭಾರತ-ಅಮೆರಿಕದ ವ್ಯಾಪಾರಒಪ್ಪಂದ ಮಾತುಕತೆ ಮುಂದಕ್ಕೆ