ಸಣ್ಣ ರಾಜಕಾರಣಿಯಂತೆ ‘ಭಯಗ್ರಸ್ತ’ ಮೋದಿ ವರ್ತನೆ: ಖರ್ಗೆ ಆಕ್ರೋಶ

KannadaprabhaNewsNetwork |  
Published : Apr 25, 2024, 01:04 AM ISTUpdated : Apr 25, 2024, 05:23 AM IST
Mallikarjun Kharge

ಸಾರಾಂಶ

ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಮುಗಿದಿದೆ. ಮೊದಲ ಹಂತದ ವೋಟಿಂಗ್ ನಲ್ಲಿ ಅದೃಶ್ಯ ಮತದಾರರಿಂದ ಮೋದಿಗೆ ಭಯ ಶುರುವಾಗಿದೆ.

ತಿರುವನಂತಪುರ:‘ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಮುಗಿದಿದೆ. ಮೊದಲ ಹಂತದ ವೋಟಿಂಗ್ ನಲ್ಲಿ ಅದೃಶ್ಯ ಮತದಾರರಿಂದ ಮೋದಿಗೆ ಭಯ ಶುರುವಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಖರ್ಗೆ,‘ಮೋದಿ ಸಣ್ಣ ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ. ಅವರು ಈ ದೇಶದ ಇತಿಹಾಸ, ರಾಷ್ಟ್ರದ ಒಗ್ಗಟ್ಟಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿದೆ. ಒಂದು ವೇಳೆ ಮೋದಿಗೆ ಕಾಂಗ್ರೆಸ್ ಏನೂ ಅಲ್ಲವಾಗಿದ್ದರೆ , ಯಾಕೆ ಬಹಳ ಹಳೆಯ ಪಕ್ಷದ ಬಗ್ಗೆ ಇಷ್ಟೊಂದು ಯೋಚಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಕಳೆದ 3 ದಿನದಿಂದ ಮೋದಿ ಅವರು ಕಾಂಗ್ರೆಸ್ ಪಕ್ಷವು ದಲಿತರ ಮೀಸಲು ಕಿತ್ತು ಮುಸ್ಲಿಮರಿಗೆ ಕೊಡಲಿದೆ ಹಾಗೂ ದೇಶದ ಜನರ ಆಸ್ತಿಯನ್ನು ಮುಸ್ಲಿಮರಿಗೆ ಹಂಚಲಿದೆ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ