9.26 ಕೋಟಿ ಕೃಷಿಕರಿಗೆ ತಲಾ ₹2000 ಬಿಡುಗಡೆ

KannadaprabhaNewsNetwork |  
Published : Jun 19, 2024, 01:12 AM ISTUpdated : Jun 19, 2024, 07:31 AM IST
ಮೋದಿ-ಲತಾ ಹೆಗ್ಡೆ | Kannada Prabha

ಸಾರಾಂಶ

ಕಿಸಾನ್‌ ಸಮ್ಮಾನ್‌ ನಿಧಿಯು ವಿಶ್ವದ ಅತಿ ದೊಡ್ಡ ನೇರ ನಗದು ವರ್ಗಾವಣೆ ಯೋಜನೆಯಾಗಿದೆ. 2019ರಲ್ಲಿ ಯೋಜನೆ ಜಾರಿ ಆದ ನಂತರ ಈವರೆಗೆ ರೈತರ ಖಾತೆಗೆ 3.25 ಲಕ್ಷ ಕೋಟಿ ರು.ಗಳನ್ನು ಜಮೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

 ವಾರಾಣಸಿ :  ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 9.26 ಕೋಟಿಗೂ ಹೆಚ್ಚು ರೈತರಿಗೆ ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತಿನ 20,000 ಕೋಟಿ ರು. ಬಿಡುಗಡೆ ಮಾಡಿದರು.

ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಈ ಮೊತ್ತವನ್ನು ಬಿಡುಗಡೆ ಮಾಡಿ ಸಾಂಕೇತಿಕವಾಗಿ ಕೆಲವು ರೈತರಿಗೆ ಹಣದ ಚೆಕ್‌ ನೀಡಿದರು.

ಈ ಯೋಜನೆಯ ಮೂಲಕ ರೈತರಿಗೆ ವಾರ್ಷಿಕ 6 ಸಾವಿರ ರು.ಗಳನ್ನು ನೀಡಲಾಗುತ್ತದೆ. ಪ್ರತಿ 4 ತಿಂಗಳಿಗೆ ಒಮ್ಮೆ ತಲಾ 2 ಸಾವಿರ ರು.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ವರ್ಷಕ್ಕೆ ರೈತರಿಗೆ 6 ಸಾವಿರ ರು. ನೆರವು ಸಿಗುತ್ತದೆ.

ಹಣ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಕಿಸಾನ್‌ ಸಮ್ಮಾನ್‌ ನಿಧಿಯು ವಿಶ್ವದ ಅತಿ ದೊಡ್ಡ ನೇರ ನಗದು ವರ್ಗಾವಣೆ ಯೋಜನೆಯಾಗಿದೆ. 2019ರಲ್ಲಿ ಯೋಜನೆ ಜಾರಿ ಆದ ನಂತರ ಈವರೆಗೆ ರೈತರ ಖಾತೆಗೆ 3.25 ಲಕ್ಷ ಕೋಟಿ ರು.ಗಳನ್ನು ಜಮೆ ಮಾಡಲಾಗಿದೆ. ಈ ಹಣದ ಮೂಲಕ ರೈತರಿಗೆ ಆಸರೆ ಆಗುವ ಆಸೆ ನಮ್ಮ ಸರ್ಕಾರದ್ದಾಗಿದೆ’ ಎಂದರು.

ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮ ಮೊದಲ ಕ್ರಮವಾಗಿ, ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಬಿಡುಗಡೆಗೆ ಮೋದಿ ಅವರು ಇತ್ತೀಚೆಗೆ ಸಹಿ ಹಾಕಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ