ಇರಾನ್ ಅಧ್ಯಕ್ಷ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

KannadaprabhaNewsNetwork |  
Published : May 21, 2024, 01:58 AM ISTUpdated : May 21, 2024, 05:18 AM IST
ಮೋದಿ | Kannada Prabha

ಸಾರಾಂಶ

ಇರಾನ್ ಅಧ್ಯಕ್ಷ ಸಾವಿಗೆ ಮೋದಿ ಆಘಾತ ವ್ಯಕ್ತಪಡಿಸಿದ್ದು, ಇರಾನ್‌ ಜೊತೆಗೆ ಭಾರತ ನಿಲ್ಲಲಿದೆ ಎಂದು ಪ್ರಧಾನಿ ಅಭಯಹಸ್ತ ನೀಡಿದ್ದಾರೆ.

ನವದೆಹಲಿ: ಇರಾನ್‌ ಅಧ್ಯಕ್ಷ ಸೈಯ್ಯದ್‌ ಇಬ್ರಾಹಿಂ ರೈಸಿ ಮತ್ತು ಅಲ್ಲಿನ ವಿದೇಶಾಂಗ ಮಂತ್ರಿ ಅವರು ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿ, ‘ಅಧ್ಯಕ್ಷರನ್ನು ಕಳೆದುಕೊಂಡಿರುವ ದುಃಖದ ಸಮಯದಲ್ಲಿ ಇರಾನ್‌ ಜೊತೆಗೆ ಭಾರತ ನಿಲ್ಲಲಿದೆ.

ಇಬ್ರಾಹಿಂ ರೈಸಿ ಭಾರತ-ಇರಾನ್‌ ದ್ವಿಪಕ್ಷೀಯ ಸಂಬಂಧ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅವರ ಸಾವಿಗೆ ಸಂತಾಪ ಸೂಚಿಸುತ್ತಾ ರೈಸಿ ಕುಟುಂಬಕ್ಕೆ ಮತ್ತು ಇರಾನ್‌ ಜನತೆಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ’ ಎಂದು ಪ್ರಾರ್ಥಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!