ಶ್ರೀಕೃಷ್ಣನೇ ನನ್ನ ಹಣೆಬರಹದಲ್ಲಿ ಸುದರ್ಶನ ಸೇತು ಬರೆದಿದ್ದ: ಮೋದಿ

KannadaprabhaNewsNetwork |  
Published : Feb 26, 2024, 01:30 AM ISTUpdated : Feb 26, 2024, 03:03 PM IST
ಸುದರ್ಶನ ಸೇತು | Kannada Prabha

ಸಾರಾಂಶ

ನನ್ನ ಬಳಿಯೇ ಸುದರ್ಶನ ಸೇತುವಿನ ಲೋಕಾರ್ಪಣೆ ಕೆಲಸ ಮಾಡಿಸಿದ್ದಕ್ಕೆ ಶ್ರೀಕೃಷ್ಣನಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

ದ್ವಾರಕಾ: ದ್ವಾರಕೆಯಿಂದ ಬೇಟ್‌ ದ್ವಾರಕೆಗೆ ಸಂಪರ್ಕ ಕಲ್ಪಿಸುವ 2.32 ಕಿ.ಮೀ ಉದ್ದದ ಕೇಬಲ್‌ ಸೇತುವೆಯನ್ನು (ಸುದರ್ಶನ ಸೇತುವೆ) ನನ್ನಿಂದಲೇ ನಿರ್ಮಿಸುವುದು ಶ್ರೀಕೃಷ್ಣನ ಇಚ್ಛೆಯಾಗಿತ್ತು. ಅದೀಗ ಪೂರ್ಣಗೊಂಡಿದೆ. 

ಇದಕ್ಕಾಗಿ ಶ್ರೀಕೃಷ್ಣನಿಗೆ ಧನ್ಯವಾದ ಅರ್ಪಿಸುತ್ತೇನೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಶ್ರೀರಾಮನ ಬಳಿಕ ಮೋದಿ ಕೃಷ್ಣನನ್ನು ಭಜಸಿದ್ದಾರೆ.

ಸೇತುವೆ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ, ‘ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಕೇಂದ್ರದ ಕಾಂಗ್ರೆಸ್‌ ಸರ್ಕಾರಕ್ಕೆ ಈ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ್ದೆ. ಆದರೆ ಅವರು ಅದನ್ನು ಕಡೆಗಣಿಸಿದ್ದರು. 

ಆದರೆ ಇಂದು ಅದೇ ಸೇತುವೆಯನ್ನು ನಾನು ಉದ್ಘಾಟಿಸಿದ್ದೇನೆ. ನನ್ನ ಕನಸು ನನಸಾಗಿದ್ದಕ್ಕೆ ನನ್ನ ಹೃದಯ ತುಂಬಿಬಂದಿದೆ. ಹೀಗಾಗಿಯೇ ನಾನು ಶ್ರೀಕೃಷ್ಣನಿಗೆ ನವಿಲುಗರಿ ಅರ್ಪಿಸಿದ್ದೇನೆ. 

ಈ ನಿರ್ಮಾಣ ನನ್ನಿಂದಲೇ ಆಗಬೇಕೆಂದು ಶ್ರೀಕೃಷ್ಣ ನನ್ನ ಹಣೆಯಲ್ಲಿ ಬರೆದಿದ್ದ. ಅದನ್ನು ಇದೀಗ ಶ್ರೀಕೃಷ್ಣ ಸಾಧ್ಯವಾಗಿಸಿದ್ದಾನೆ. ಅದಕ್ಕಾಗಿ ನಾನು ಆತನಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ
ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ