ಮದುವೆ ಬಳಿಕ ಮೊದಲ ಸಲ ಪತಿ ಕಾಣಲು ಹೋಗುತ್ತಿದ್ದಾಕೆ ದುರಂತಕ್ಕೆ ಬಲಿ

KannadaprabhaNewsNetwork |  
Published : Jun 13, 2025, 03:56 AM IST
ಖುಷ್ಬೂ  | Kannada Prabha

ಸಾರಾಂಶ

ಕೇವಲ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಾಜಸ್ಥಾನದ ಖುಷ್ಬೂ ರಾಜ್‌ಪುರೋಹಿತ್‌ ಮೊದಲ ಸಲ ಪತಿಯ ಕಾಣುವುದಕ್ಕೆ ಲಂಡನ್‌ಗೆ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಅವರ ಅಹಮದಾಬಾದ್‌ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ಪುತ್ರಿ ಖುಷ್ಬೂ ಕಳುಹಿಸಿ ಬಂದಿದ್ದ ತಂದೆಯ ಕಣ್ಣೀರ ರೋಧನ

ಅಹಮದಾಬಾದ್‌: ಕೇವಲ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಾಜಸ್ಥಾನದ ಖುಷ್ಬೂ ರಾಜ್‌ಪುರೋಹಿತ್‌ ಮೊದಲ ಸಲ ಪತಿಯ ಕಾಣುವುದಕ್ಕೆ ಲಂಡನ್‌ಗೆ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಅವರ ಅಹಮದಾಬಾದ್‌ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಅರಬಾ ದುದಾವತ್‌ ಗ್ರಾಮದ ಖುಷ್ಬೂ ಈ ವರ್ಷದ ಜನವರಿಯಲ್ಲಿ ವಿಪುಲ್ ಸಿಂಗ್ ಎನ್ನುವವರನ್ನು ಮದುವೆಯಾಗಿದ್ದರು. ವಿಪುಲ್‌ ವೈದ್ಯರಾಗಿದ್ದು, ಲಂಡನ್‌ನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೆಲೆಸಿದ್ದರು. ಮದುವೆಯ ನಂತರ ಪತಿಯನ್ನು ನೋಡಿರದ ಆಕೆ ವೀಸಾ ಮತ್ತು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು 5 ತಿಂಗಳ ಬಳಿಕ ಪತಿಯನ್ನು ಕಾಣುವ ಖುಷಿಯಲ್ಲಿ ವಿಮಾನ ಹತ್ತಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಸಂಭವಿಸಿದ ದುರಂತದಲ್ಲಿ ಅಸುನೀಗಿದ್ದಾರೆ. ಇನ್ನೂ ಅವಘಡದಲ್ಲಿ ಮರಣ ಹೊಂದಿದವರ ಪೈಕಿ ರಾಜಸ್ಥಾನದ 13 ಪ್ರಯಾಣಿಕರಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೊಜ್ತಬಾ ಪತ್ತೆಗಾಗಿ ಅಮೆರಿಕ,ಇಸ್ರೇಲ್‌ ಗುಪ್ತಚರ ಹುಡುಕಾಟ
ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌!