ಪುತ್ರಿ ಖುಷ್ಬೂ ಕಳುಹಿಸಿ ಬಂದಿದ್ದ ತಂದೆಯ ಕಣ್ಣೀರ ರೋಧನ
ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಅರಬಾ ದುದಾವತ್ ಗ್ರಾಮದ ಖುಷ್ಬೂ ಈ ವರ್ಷದ ಜನವರಿಯಲ್ಲಿ ವಿಪುಲ್ ಸಿಂಗ್ ಎನ್ನುವವರನ್ನು ಮದುವೆಯಾಗಿದ್ದರು. ವಿಪುಲ್ ವೈದ್ಯರಾಗಿದ್ದು, ಲಂಡನ್ನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೆಲೆಸಿದ್ದರು. ಮದುವೆಯ ನಂತರ ಪತಿಯನ್ನು ನೋಡಿರದ ಆಕೆ ವೀಸಾ ಮತ್ತು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು 5 ತಿಂಗಳ ಬಳಿಕ ಪತಿಯನ್ನು ಕಾಣುವ ಖುಷಿಯಲ್ಲಿ ವಿಮಾನ ಹತ್ತಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಸಂಭವಿಸಿದ ದುರಂತದಲ್ಲಿ ಅಸುನೀಗಿದ್ದಾರೆ. ಇನ್ನೂ ಅವಘಡದಲ್ಲಿ ಮರಣ ಹೊಂದಿದವರ ಪೈಕಿ ರಾಜಸ್ಥಾನದ 13 ಪ್ರಯಾಣಿಕರಿದ್ದಾರೆ.