ಮದುವೆ ಬಳಿಕ ಮೊದಲ ಸಲ ಪತಿ ಕಾಣಲು ಹೋಗುತ್ತಿದ್ದಾಕೆ ದುರಂತಕ್ಕೆ ಬಲಿ

KannadaprabhaNewsNetwork |  
Published : Jun 13, 2025, 03:56 AM IST
ಖುಷ್ಬೂ  | Kannada Prabha

ಸಾರಾಂಶ

ಕೇವಲ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಾಜಸ್ಥಾನದ ಖುಷ್ಬೂ ರಾಜ್‌ಪುರೋಹಿತ್‌ ಮೊದಲ ಸಲ ಪತಿಯ ಕಾಣುವುದಕ್ಕೆ ಲಂಡನ್‌ಗೆ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಅವರ ಅಹಮದಾಬಾದ್‌ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ಪುತ್ರಿ ಖುಷ್ಬೂ ಕಳುಹಿಸಿ ಬಂದಿದ್ದ ತಂದೆಯ ಕಣ್ಣೀರ ರೋಧನ

ಅಹಮದಾಬಾದ್‌: ಕೇವಲ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಾಜಸ್ಥಾನದ ಖುಷ್ಬೂ ರಾಜ್‌ಪುರೋಹಿತ್‌ ಮೊದಲ ಸಲ ಪತಿಯ ಕಾಣುವುದಕ್ಕೆ ಲಂಡನ್‌ಗೆ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಅವರ ಅಹಮದಾಬಾದ್‌ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಅರಬಾ ದುದಾವತ್‌ ಗ್ರಾಮದ ಖುಷ್ಬೂ ಈ ವರ್ಷದ ಜನವರಿಯಲ್ಲಿ ವಿಪುಲ್ ಸಿಂಗ್ ಎನ್ನುವವರನ್ನು ಮದುವೆಯಾಗಿದ್ದರು. ವಿಪುಲ್‌ ವೈದ್ಯರಾಗಿದ್ದು, ಲಂಡನ್‌ನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೆಲೆಸಿದ್ದರು. ಮದುವೆಯ ನಂತರ ಪತಿಯನ್ನು ನೋಡಿರದ ಆಕೆ ವೀಸಾ ಮತ್ತು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು 5 ತಿಂಗಳ ಬಳಿಕ ಪತಿಯನ್ನು ಕಾಣುವ ಖುಷಿಯಲ್ಲಿ ವಿಮಾನ ಹತ್ತಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಸಂಭವಿಸಿದ ದುರಂತದಲ್ಲಿ ಅಸುನೀಗಿದ್ದಾರೆ. ಇನ್ನೂ ಅವಘಡದಲ್ಲಿ ಮರಣ ಹೊಂದಿದವರ ಪೈಕಿ ರಾಜಸ್ಥಾನದ 13 ಪ್ರಯಾಣಿಕರಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ