ಫೆರಾರಿ ಇದ್ರೂ ಸಂಚಾರ ನಿಯಮ ಪಾಲಿಸಿ: ಪೇಟಿಎಂಗೆ ಆರ್‌ಬಿಐ ಟಾಂಗ್‌

KannadaprabhaNewsNetwork |  
Published : Mar 08, 2024, 01:46 AM IST
ಪೇಟಿಎಂ | Kannada Prabha

ಸಾರಾಂಶ

ಪೇಟಿಎಂ ಮೇಲಿನ ನಿರ್ಬಂಧ ಕ್ರಮವನ್ನು ಸಮಸ್ತ ಫಿನ್‌ಟೆಕ್‌ ಮೇಲಿನ ಕ್ರಮ ಎಂದು ಅಪಪ್ರಚಾರ ಮಾಡುವುದು ತಪ್ಪು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ

ಮುಂಬೈ: ಕೆವೈಸಿ ಅಕ್ರಮ ಎಸಗಿರುವ ಕಾರಣ ಮಾ.15ರಿಂದ ನಿರ್ಬಂಧಕ್ಕೆ ಒಳಗಾಗುತ್ತಿರುವ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.

‘ಪೇಟಿಎಂ ಮೇಲಿನ ಕ್ರಮವು ಫಿನ್‌ಟೆಕ್‌ ವಲಯದ ಮೇಲೆ ಕೈಗೊಂಡ ಕ್ರಮ ಅಲ್ಲ.

ನಿಯಮ ಪಾಲಿಸದ ಕಾರಣಕ್ಕಷ್ಟೇ ಪೇಟಿಎಂ ಬ್ಯಾಂಕ್‌ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಒಬ್ಬ ವ್ಯಕ್ತಿ ಐಷಾರಾಮಿ ಫೆರಾರಿ ಕಾರು ಹೊಂದಿರಬಹುದು. ಜೋರಾಗಿ ಕಾರು ಓಡಿಸಬಹುದು.

ಆದರೆ ಅಪಘಾತ ತಪ್ಪಿಸಲು ಸಂಚಾರ ನಿಯಮ ಪಾಲಿಸಲೇಬೇಕು’ ಎಂದು ದಾಸ್‌ ಟಾಂಗ್‌ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಷೇರಿಗಿಂತ ಚಿನ್ನ ಬೆಳ್ಳಿ ಹೂಡಿಕೆಯೇ ಹೆಚ್ಚು ಲಾಭ
=‘ಚೈನೀಸ್’ ಎಂದು ಬೈದು ತ್ರಿಪುರದ ಯುವಕನ ಹತ್ಯೆ