ಉಚಿತ ಕೊಡುಗೆ ಪ್ರಶ್ನಿಸಿದ್ದ ಅರ್ಜಿ ಮಾರ್ಚಲ್ಲಿ ವಿಚಾರಣೆ : ಸುಪ್ರೀಂ

KannadaprabhaNewsNetwork |  
Published : Feb 06, 2026, 02:00 AM ISTUpdated : Feb 06, 2026, 05:02 AM IST
supreme court

ಸಾರಾಂಶ

ಚುನಾವಣೆಯಲ್ಲಿ ಮತಗಳನ್ನು ಸೆಳೆಯುವ ಉದ್ದೇಶದೊಂದಿಗೆ ರಾಜಕೀಯ ಪಕ್ಷಗಳು ಭರವಸೆಗಳನ್ನು ಕೊಡುವ ಭರದಲ್ಲಿ ಭರ್ಜರಿ ಉಚಿತಗಳನ್ನು ಘೋಷಿಸುತ್ತಿರುವ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮಾರ್ಚ್‌ನಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ನವದೆಹಲಿ: ಚುನಾವಣೆಯಲ್ಲಿ ಮತಗಳನ್ನು ಸೆಳೆಯುವ ಉದ್ದೇಶದೊಂದಿಗೆ ರಾಜಕೀಯ ಪಕ್ಷಗಳು ಭರವಸೆಗಳನ್ನು ಕೊಡುವ ಭರದಲ್ಲಿ ಭರ್ಜರಿ ಉಚಿತಗಳನ್ನು ಘೋಷಿಸುತ್ತಿರುವ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮಾರ್ಚ್‌ನಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ತರ್ಕಬದ್ಧವಲ್ಲದ ಭರವಸೆ

ತರ್ಕಬದ್ಧವಲ್ಲದ ಭರವಸೆಗಳನ್ನು ನೀಡುವ ಪಕ್ಷಗಳ ಚಿಹ್ನೆಯನ್ನು ವಶಪಡಿಸಿಕೊಳ್ಳುವುದು ಅಥವಾ ಅದರ ನೋಂದಣಿಯನ್ನು ರದ್ದುಗೊಳಿಸುವಂತಹ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಬಗ್ಗೆ ಸ್ವತಃ ನ್ಯಾ। ಅಶ್ವಿನಿ ಉಪಾಧ್ಯಾಯ ಅವರು 2022ರಲ್ಲಿ ಕೇಂದ್ರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್‌ ನೀಡಿದ್ದು, ಅದರಲ್ಲಿ, ‘ಸೂರ್ಯ, ಚಂದ್ರನನ್ನು ಬಿಟ್ಟು ಉಳಿದೆಲ್ಲವನ್ನೂ ಕೊಡುವುದಾಗಿ ಪಕ್ಷಗಳು ಭರವಸೆ ನೀಡುತ್ತದೆ.

ಭ್ರಷ್ಟಾಚಾರಕ್ಕೆ ಸಮ

 ಇದು ಭ್ರಷ್ಟಾಚಾರಕ್ಕೆ ಸಮ. ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮಾರಕವಾಗಿರುವ ಇದು, ಸಂವಿಧಾನಕ್ಕೂ ಹಾನಿಯುಂಟುಮಾಡುತ್ತದೆ’ ಎಂದು ವಾದಿಸಿದ್ದರು. ಜತೆಗೆ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದರು. ಆ ವೇಳೆ ಸಿಜೆಐ ಆಗಿದ್ದ ನ್ಯಾ। ಎನ್‌.ವಿ. ರಮಣ ಅವರ ಪೀಠ ಉಚಿತಗಳ ಭರವಸೆ ಮಿತಿಮೀರುತ್ತಿರುವುದನ್ನು ಗಮನಿಸಿ ಈ ಬಗ್ಗೆ ಪ್ರತಿಕ್ಗರಿಯಿಸುವಂತೆ ಕೇಂದ್ರ ಹಾಗೂ ಆಯೋಗಕ್ಕೆ ತಾಕೀತು ಮಾಡಿತ್ತು.

ಆ ಅರ್ಜಿಯನ್ನು ಪರಿಗಣಿಸಿರುವ ಸಿಜೆ ನ್ಯಾ। ಸೂರ್ಯಕಾಂತ್‌ ಅವರು, ‘ಇದು ಗಂಭೀರ ವಿಚಾರವಾಗಿದ್ದು, ಮಾರ್ಚ್‌ನಲ್ಲಿ ಅವಶ್ಯವಾಗಿ ವಿಚಾರಣೆ ನಡೆಸಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಕೇರಳ, ಬಂಗಾಳ, ತಮಿಳುನಾಡು ಸೇರಿ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದೇಶದ ಸಂಸದೀಯ ಇತಿಹಾಸದಲ್ಲೇ ಕಂಡುಕೇಳರಿಯದ ಸಂಗತಿ : ಪ್ರಧಾನಿ ಮೋದಿ ಮೇಲೆ ಹಲ್ಲೆಗೆ ಯತ್ನ?
3 ತಿಂಗಳ ಹಿಂದೆ ಮದ್ವೆ, ಈಗ ಲವರ್‌ ಜತೆ ಸೇರಿ ಪತಿ ಹತ್ಯೆ!