ಛತ್ತೀಸ್‌ಗಢದ ಕೊನೆಯ ನಕ್ಸಲ್‌ ನಾಯಕ ಪಾಪಾ ರಾವ್ ಶರಣು

KannadaprabhaNewsNetwork |  
Published : Mar 25, 2026, 03:45 AM IST
papa Rao

ಸಾರಾಂಶ

ಛತ್ತೀಸ್‌ಗಢದ ಕೊನೆಯ ನಕ್ಸಲ್ ನಾಯಕ ಎನ್ನಿಸಿಕೊಂಡಿರುವ ಹಿರಿಯ ಮಾವೋವಾದಿ ಕಮಾಂಡರ್‌ ಪಾಪಾ ರಾವ್‌, ತನ್ನ ತಂಡದ ಸದಸ್ಯರ ಜತೆ ಮಂಗಳವಾರ ಶರಣಾಗಿದ್ದಾನೆ. ಉಪಮುಖ್ಯಮಂತ್ರಿ ವಿಜಯ್‌ ಶರ್ಮಾ, ರಾವ್‌ ಶರಣಾಗತಿ ನಕ್ಸಲ್‌ ವಿರೋಧಿ ಹೋರಾಟದಲ್ಲಿ ಮಹತ್ವದ ಹೆಜ್ಜೆ ಎಂದಿದ್ದಾರೆ.

 ರಾಯ್‌ಪುರ :  ಛತ್ತೀಸ್‌ಗಢದ ಕೊನೆಯ ನಕ್ಸಲ್ ನಾಯಕ ಎನ್ನಿಸಿಕೊಂಡಿರುವ ಹಿರಿಯ ಮಾವೋವಾದಿ ಕಮಾಂಡರ್‌ ಪಾಪಾ ರಾವ್‌, ತನ್ನ ತಂಡದ ಸದಸ್ಯರ ಜತೆ ಮಂಗಳವಾರ ಶರಣಾಗಿದ್ದಾನೆ.

ನಕ್ಸಲ್‌ ವಿರೋಧಿ ಹೋರಾಟದಲ್ಲಿ ಮಹತ್ವದ ಹೆಜ್ಜೆ

ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ವಿಜಯ್‌ ಶರ್ಮಾ, ರಾವ್‌ ಶರಣಾಗತಿ ನಕ್ಸಲ್‌ ವಿರೋಧಿ ಹೋರಾಟದಲ್ಲಿ ಮಹತ್ವದ ಹೆಜ್ಜೆ. ಈ ಮೂಲಕ ಮಾ.31ರ ವೇಳೆಗೆ ಛತ್ತೀಸ್‌ಗಢ ನಕ್ಸಲ್‌ ಮುಕ್ತವಾಗಲಿದೆ ಎಂದಿದ್ದಾರೆ.

ನಕ್ಸಲ್‌ ಕಾರ್ಯಚಟುವಟಿಕೆ ಇರುವುದಿಲ್ಲ

ಕಬೀರ್‌ಧಾಮ್‌ ಜಿಲ್ಲೆಯ ಇಲ್ಲಿಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪಾ ರಾವ್‌ ಶಸ್ತ್ರಾಸ್ತ್ರ ತ್ಯಾಗದಿಂದ ರಾಜ್ಯದಲ್ಲಿ ಯಾವುದೇ ನಕ್ಸಲ್‌ ಕಾರ್ಯಚಟುವಟಿಕೆ ಇರುವುದಿಲ್ಲ ಎಂದು ಸ್ಪಷ್ಟವಾಗುತ್ತದೆ. ಇದು ಎಡಪಂಥೀಯ ಉಗ್ರರ ಜತೆ ರಾಜ್ಯ ನಡೆಸುತ್ತಿರುವ ಹೋರಾಟಕ್ಕೆ ಹೊಸ ಮೈಲಿಗಲ್ಲಾಗಲಿದೆ ಎಂದಿದ್ದಾರೆ.

ಬಸ್ತರ್‌ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಪಾಪಾ ರಾವ್‌ ತನ್ನ ಮಾವೋವಾದಿಗಳ ದಂಡಕಾರಣ್ಯ ವಿಶೇಷ ವಲಯ ಸಮಿತಿಯ 12ಕ್ಕೂ ಹೆಚ್ಚು ಸದಸ್ಯರ ಜತೆ ಶರಣಾಗಿದ್ದಾನೆ. ಆತ 25 ವರ್ಷಗಳಿಂದ ನಕ್ಸಲ್‌ ಹೋರಾಟದಲ್ಲಿದ್ದು, ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿ 76ಕ್ಕೂ ಹೆಚ್ಚು ಸೈನಿಕರ ಸಾವಿಗೆ ಕಾರಣನಾಗಿದ್ದಾನೆ. ಈತನ ಹಿಡಿದು ಕೊಟ್ಟವರಿಗೆ 25 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಡವ್ರಿಗೆ ಫ್ರಿಜ್‌, ಗಂಡಸ್ರಿಗೂಫ್ರೀ ಬಸ್‌ : ಅಣ್ಣಾ ಗ್ಯಾರಂಟಿ!ಉಚಿತ- ತಮಿಳ್ನಾಡಲ್ಲಿ ಭರ್ಜರಿ ಗ್ಯಾರಂಟಿ ಘೋಷಣೆ- ಸುಪ್ರೀಂ ಎಚ್ಚರಿಸಿದರೂ ನಿಲ್ಲದ ಆಫರ್‌
ಯುದ್ಧ, ಷರತ್ತಿನ ನಡುವೆಯೂ ಕೊಲ್ಲಿ ಸಂಘರ್ಷ - ತಡೆಗೆ ಚರ್ಚೆ