ನಾಗಪುರ: ರಾಜಕೀಯ ವೈರತ್ವದ ಹೊರತಾಗಿಯೂ ಶಿವಸೇನೆ (ಉದ್ಧವ್) ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
2019ರವರೆಗೆ ಬಿಜೆಪಿ ಜತೆ ಒಟ್ಟಿಗೆ ಇದ್ದ ಶಿವಸೇನೆ, ಬಿಜೆಪಿಯು ಮುಖ್ಯಮಂತ್ರಿ ನೀಡದ ಕಾರಣ ಮೈತ್ರಿ ಮುರಿದುಕೊಂಡು ಕಾಂಗ್ರೆಸ್ ಜೊತೆ ಕೈಜೋಡಿಸಿತ್ತು. ಬಳಿಕ ಶಿವಸೇನೆ ಇಬ್ಭಾಗವಾಗಿತ್ತು.
ವಿವಾದಿತ ಹೇಳಿಕೆ: ಸುಪ್ರೀಂ ಕೊಲಿಜಿಯಂ ಎದುರು ಜಡ್ಜ್ ಹಾಜರುನವದೆಹಲಿ: ಪ್ರಯಾಗ್ರಾಜ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದಿಷ್ಟ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾ। ಶೇಖರ್ ಕುಮಾರ್ ಯಾದವ್ ಸುಪ್ರೀಂ ಕೋರ್ಟ್ನ ಕೊಲಿಜಿಯಂ ಪೀಠದ ಎದುರು ವಿಚಾರಣೆಗೆ ಹಾಜರಾದರು. ಮೂಲಗಳ ಪ್ರಕಾರ, ಮಂಗಳವಾರ ಯಾದವ್ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾ। ಸಂಜೀವ್ ಖನ್ನಾ ಎದುರು ವಿಚಾರಣೆಗೆ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದರು. ಪ್ರಯಾಗ್ರಾಜ್ನಲ್ಲಿ ಡಿ.8ರಂದು ನಡೆದ ಕಾರ್ಯಕ್ರಮದಲ್ಲಿ ನ್ಯಾ।ಶೇಖರ್ ಕುಮಾರ್ ಯಾದವ್ ಅವರು ಒಂದು ನಿರ್ದಿಷ್ಟ ಧರ್ಮದ ಆಚರಣೆ ಟೀಕಿಸಿದ್ದರು ಹಾಗೂ ‘ಹಿಂದುಸ್ತಾನದಲ್ಲಿ ಬಹುಸಂಖ್ಯಾತರ ಇಚ್ಛೆಯಂತೆ ಕೆಲಸ ನಡೆಯುತ್ತದೆ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.ನಾನೇನು ಕೈಗೊಂಬೆಯೇ?: ಅಜಿತ್, ಪ್ರಫುಲ್ ವಿರುದ್ಧ ಭುಜಬಲ್ ವಾಗ್ದಾಳಿನಾಸಿಕ್: ಇತ್ತೀಚೆಗಿನ ಮಹಾರಾಷ್ಟ್ರ ಸಂಪುಟ ವಿಸ್ತರಣೆಯಲ್ಲಿ ತಮ್ಮನ್ನು ಹೊರಗಿಟ್ಟಿರುವ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿರುವ ಎನ್ಸಿಪಿ ಹಿರಿಯ ಶಾಸಕ ಛಗನ್ ಭುಜಬಲ್ ಮಂಗಳವಾರ ಪಕ್ಷದ ಅಧ್ಯಕ್ಷ ಮತ್ತು ಡಿಸಿಎಂ ಅಜಿತ್ ಪವಾರ್ ಮತ್ತು ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ನಾನೇನು ನಿಮ್ಮ ಕೈಯಲ್ಲಿನ ಗೊಂಬೆಯೇ?’ ಎಂದು ಪ್ರಶ್ನಿಸಿದ್ದಾರೆ.ಸಚಿವ ಸ್ಥಾನ ಸಿಗದೆ ಬೇಸರಗೊಂಡಿರುವ ಭುಜಬಲ್ ಅವರು ನಡೆಯುತ್ತಿರುವ ಸದನದ ಚಳಿಗಾಲದ ಅಧಿವೇಶನವನ್ನು ಬಿಟ್ಟು ಮಂಗಳವಾರ ನಾಸಿಕ್ ತಲುಪಿದರು. ಅಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನನ್ನನ್ನು ಸಚಿವ ಮಾಡುವುದಾಗಿ ಹೇಳಿದ್ದರು. ಆದರೆ ಇದನ್ನು ತಡೆದವರು ಯಾರು ಎಂದು ಕಂಡುಹಿಡಿಯುವೆ’ ಎಂದು ಘೋಷಿಸಿದರು.
ಅಲ್ಲು ಜಾಮೀನು ವಿರುದ್ಧ ತೆಲಂಗಾಣ ಪೊಲೀಸ್ ಸುಪ್ರೀಂಗೆ?
ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪಾ 2 ಚಲನಚಿತ್ರ ಪ್ರದರ್ಶನಕ್ಕೆ ನಟ ಅಲ್ಲು ಅರ್ಜುನ್ ಆಗಮಿಸಿದ್ದ ವೇಳೆ ಅವರನ್ನು ನೋಡಲು ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟಿದ್ದರು.