ಉದ್ಧವ್‌ ಬಣದ 2 ಸಂಸದರು ನಮ್ಮ ಸಂಪರ್ಕದಲ್ಲಿ: ಶಿಂಧೆ ಬಣ

KannadaprabhaNewsNetwork |  
Published : Jun 09, 2024, 01:41 AM ISTUpdated : Jun 09, 2024, 04:06 AM IST
ಶಿವಸೇನೆ | Kannada Prabha

ಸಾರಾಂಶ

ಉದ್ಧವ್‌ ಠಾಕ್ರೆ ಬಣದ ಇಬ್ಬರು ನೂತನ ಸಂಸದರು ತಮ್ಮ ಜೊತೆಗಿರುವುದಾಗಿ ಥಾಣೆ ಕ್ಷೇತ್ರದ ಶಿವಸೇನಾ (ಶಿಂಧೆ) ಬಣದ ಸಂಸದ ನರೇಶ್‌ ಹೇಳಿಕೆ ನೀಡಿದ್ದಾರೆ.

ನವದೆಹಲಿ: ಉದ್ಧವ್‌ ಠಾಕ್ರೆ ಬಣದ ಇಬ್ಬರು ನೂತನ ಶಿವಸೇನಾ ಸಂಸದರು ತಮ್ಮ ಸಂಪರ್ಕದಲ್ಲಿರುವುದಾಗಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದ ಶಿವಸೇನಾ ವಕ್ತಾರ ನರೇಶ್‌ ಮ್ಹಾಸ್ಕೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನರೇಶ್‌, ‘ಉದ್ಧವ್‌ ಠಾಕ್ರೆಯವರು ಒಂದು ಸಮುದಾಯದ ಜನರನ್ನು ಬಸ್‌ಗಳಲ್ಲಿ ಕರೆತಂದು ಮತಯಾಚಿಸಿದ ನಡೆಗೆ ಇಬ್ಬರು ನೂತನ ಸಂಸದರು ಅಸಮಾಧಾನ ಹೊಂದಿದ್ದಾರೆ. ಅವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಅವರ ಜೊತೆ ಇನ್ನೂ ನಾಲ್ವರು ಕೂಡಿಕೊಳ್ಳಲಿದ್ದು, ಪ್ರಧಾನಿ ಮೋದಿಯ ಬಲ ಹೆಚ್ಚಿಸಲಿದ್ದಾರೆ’ ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಉದ್ಧವ್‌ ಬಣದ 9 ಸಂಸದರಿದ್ದರೆ, ಶಿಂಧೆ ಬಣದಲ್ಲಿ 7 ಸಂಸದರಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ಟಾರ್‌ವಾರ್‌ ರೀತಿ ಲೇಸರ್‌ ಅಸ್ತ್ರ ರಾಜ್ಯದಲ್ಲಿ ಅಭಿವೃದ್ಧಿ!
ಗೌರಿ ಲಂಕೇಶ್‌ ಹತ್ಯೆ ಆರೋಪಿ ಮಹಾರಾಷ್ಟ್ರ ಪಾಲಿಕೆ ಚುನಾವಣೆಗೆ