- ಪ್ರಿಯಕರ 3 ವರ್ಷ ಬಳಿಕ ಮದುವೆ ಆಗೋಣ ಎಂದಿದ್ದ
- ಹೀಗಾಗಿ ಮದುವೆಯಿಂದ 3 ವರ್ಷ ಪಾರಾಗಲು ಸಿಯಾ ತಂತ್ರ
- ಇದು ಕೇತನ್ ಕೊಲೆಯಲ್ಲಿ ಪರ್ಯಾವಸಾನ!--
=
‘ಸಿಯಾ ಪ್ರೇಮಿ ಚೇತನ್ ಚೌಧರಿ, ಆಕೆಯನ್ನು ಮದುವೆಯಾಗುವುದಕ್ಕೆ ಕನಿಷ್ಠ 3 ವರ್ಷಗಳ ಸಮಯ ಕೇಳಿದ್ದ. ಅಲ್ಲಿಯ ತನಕ ವೃತ್ತಿ ಜೀವನದ ಗಮನ ಹರಿಸುವುದಾಗಿ ಹೇಳಿದ್ದ. ಆದರೆ ಸಿಯಾ ಮದುವೆ ಕೇತನ್ ಜತೆ ಇದೇ ನವೆಂಬರ್ನಲ್ಲಿ ನಿಗದಿಯಾಗಿತ್ತು. ಹೀಗಾಗಿ 3 ವರ್ಷ ಮದುವೆ ಮುಂದೂಡುವುದಕ್ಕಾಗಿ ಕೇತನ್ನ್ನು ಕೋಟೆಯಿಂದ ತಳ್ಳಿದಳು. ಕೇತನ್ ಕತೆ ಮುಗಿದರೆ ಮನೆಯಲ್ಲಿಯೂ ಸದ್ಯಕ್ಕೆ ಶೋಕ, ಸೂತಕ ಎನ್ನುವ ಕಾರಣಕ್ಕೆ ಮದುವೆ ಬಗ್ಗೆ ಮಾತನಾಡುವುದಿಲ್ಲ. ಆಗ ಚೇತನ್ ಕೆಲಸದ ಬಗ್ಗೆ ಗಮನ ಹರಿಸಬಹುದು. ತಾನೂ ಕೂಡ 3 ವರ್ಷ ಸ್ವತಂತ್ರ ಬದುಕು ಬದುಕಬಹುದು ಎನ್ನುವುದು ಸಿಯಾ ಲೆಕ್ಕಾಚಾರವಾಗಿತ್ತು’ ಎಂದು ತನಿಖೆಯಿಂದ ತಿಳಿದು ಬಂದಿದೆ.
(ಬಾಕ್ಸ್)
ಪುಣೆ: ಫೆಬ್ರವರಿಯಲ್ಲಿ ನಿಶ್ಚಿತಾರ್ಥವಾದ ದಿನದಿಂದಲೂ ಕೇತನ್ ಅಗರ್ವಾಲ್ನನ್ನು ಮುಗಿಸಲು ಸಿಯಾ ಗೋಯಲ್ ಹಾಗೂ ಪ್ರಿಯಕರ ಚೇತನ್ ಸಂಚು ರೂಪಿಸುತ್ತಿದ್ದರು. ಹೇಗೆ ಕೊಲೆ ಮಾಡಬಹುದು ಎನ್ನುವುದಕ್ಕೆ ಗೂಗಲ್ನಲ್ಲಿ ಸರ್ಚ್ ಕೂಡ ಮಾಡಿದ್ದರು. ಅಲ್ಲದೇ ಮೊದಲೇ ಒಮ್ಮೆ ಕೋಟೆಗೆ ಹೋಗಿ ಜಾಗಗಳನ್ನು ನೋಡಿಕೊಂಡು ಬಂದು ಕೊಲೆಯ ರಿಹರ್ಸಲ್ ಮಾಡಿದ್ದರು. ಪೊಲೀಸರ ಕೈಗೆ ಸಿಕ್ಕಿಬೀಳದಿರಲು ಹೇಗೆ ವೇಷ ಮರೆಸಿಕೊಳ್ಳಬೇಕು ಹಾಗೂ ಸಿಕ್ಕಿ ಬಿದ್ದಿದ್ದರೆ ಹೇಗೆ ಉತ್ತರಿಸಬೇಕು ಅಂತ ಮೊದಲೇ ಚರ್ಚಿಸಿದ್ದರು. ಅಲ್ಲದೇ ಮೊಬೈಲ್ ಚಾಟ್ಗಳನ್ನೂ ಕೂಡ ಸಂಪೂರ್ಣವಾಗಿ ಅಳಿಸಿ ಹಾಕಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.