ದೇವಸ್ಥಾನದ ಹುಂಡಿಗೆ ಆಕಸ್ಮಿಕ ಬಿದ್ದ ಐಫೋನ್‌ ವಾಪಸ್‌ಗೆ ತಮಿಳುನಾಡಿನ ದೇಗುಲ ನಕಾರ

KannadaprabhaNewsNetwork |  
Published : Dec 22, 2024, 01:31 AM ISTUpdated : Dec 22, 2024, 04:44 AM IST
Apple I Phone

ಸಾರಾಂಶ

ದೇವಸ್ಥಾನದ ಹುಂಡಿಗೆ ಭಕ್ತರೊಬ್ಬರು ಕಾಣಿಕೆ ಹಾಕುವಾಗ ಐಫೋನ್‌ ಆಕಸ್ಮಿಕವಾಗಿ ಬಿದ್ದಿದೆ. ಆದರೆ ದೇಗುಲದ ಆಡಳಿತ ಮಂಡಳಿಯವರು, ಹುಂಡಿಗೆ ಬಿದ್ದ ಬಳಿಕ ಅದು ದೇಗುಲದ ಆಸ್ತಿ ಎಂದು ಹೇಳಿ ಐಫೋನ್‌ ವಾಪಸ್‌ ನೀಡಲು ನಿರಾಕರಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ: ದೇವಸ್ಥಾನದ ಹುಂಡಿಗೆ ಭಕ್ತರೊಬ್ಬರು ಕಾಣಿಕೆ ಹಾಕುವಾಗ ಐಫೋನ್‌ ಆಕಸ್ಮಿಕವಾಗಿ ಬಿದ್ದಿದೆ. ಆದರೆ ದೇಗುಲದ ಆಡಳಿತ ಮಂಡಳಿಯವರು, ಹುಂಡಿಗೆ ಬಿದ್ದ ಬಳಿಕ ಅದು ದೇಗುಲದ ಆಸ್ತಿ ಎಂದು ಹೇಳಿ ಐಫೋನ್‌ ವಾಪಸ್‌ ನೀಡಲು ನಿರಾಕರಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಇಲ್ಲಿನ ವಿನಾಯಕಪುರಂ ನಿವಾಸಿ ದಿನೇಶ್‌ ಚೆನ್ನೈನ ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ಬಳಿಯ ದೇಗುಲಕ್ಕೆ ಕಳೆದ ತಿಂಗಳು ಬಂದಿದ್ದರು. ಹುಂಡಿಗೆ ಹಣ ಹಾಕುವ ಸಂದರ್ಭದಲ್ಲಿ ಆಕಸ್ಮಿಕ ಐಫೋನ್‌ ಕೂಡ ಹುಂಡಿಗೆ ಬಿದ್ದಿದ್ದೆ. ದೇವಸ್ಥಾನ ದವರ ಬಳಿ ಕೇಳಿದಾಗ ಹುಂಡಿಗೆ ಹಾಕಿದ ಮೇಲೆ ಮರಳಿಸುವುದಿಲ್ಲ ಎಂದಿದ್ದಾರೆ. ಆದರೆ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಶುಕ್ರವಾರ ಹುಂಡಿ ಓಪನ್ ಮಾಡಿಸಿದ್ದಾರೆ. ಈ ವೇಳೆ ಐಫೋನ್ ಕೂಡ ಸಿಕ್ಕಿದೆ. ಆದರೆ ದೇವಸ್ಥಾನದವರು ಮೊಬೈಲ್‌ನಲ್ಲಿರುವ ಡೇಟಾವನ್ನು ಕೊಡುತ್ತೇವೆ, ಐಫೋನ್ ನೀಡುವುದಿಲ್ಲ ಎಂದಿದ್ದಾರೆ.

ಆದರೆ ಐಫೋನ್ ಬೇಕು ಅಂದಿರುವ ದಿನೇಶ್‌, ಡೇಟಾ ಮಾತ್ರ ಸ್ವೀಕಾರ ಮಾಡಲು ನಿರಾಕರಿಸಿ, ಬರಿಗೈಯಲ್ಲಿ ವಾಪಾಸ್‌ ಹೋಗಿರುವ ಘಟನೆ ನಡೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ