ಅಮರಾವತಿ: ಮೇ 13ರಂದು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ನಡೆಯುವ ಚುನಾವಣೆ ಸಂಬಂಧ ತೆಲುಗು ದೇಶಂ-ಜನಸೇನಾ ಮತ್ತು ಬಿಜೆಪಿ ಮೈತ್ರಿಕೂಟ ಮಂಗಳವಾರ ಭರ್ಜರಿ ಉಚಿತ ಕೊಡುಗೆ ಒಳಗೊಂಡ ಪ್ರಣಾಳಿಕೆ ಪ್ರಕಟಿಸಿವೆ. ಇದರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ 900 ಚದರಡಿ ಉಚಿತ ಸೈಟ್, ಬಸ್ನಲ್ಲಿ ಉಚಿತ ಪ್ರಯಾಣ, ಮಹಿಳೆಯರಿಗೆ ಪಿಂಚಣಿಯಂಥ ಹಲವು ಜನಪ್ರಿಯ ಅಂಶಗಳಿವೆ.ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ನಾಯಕ, ನಟ ಪವನ್ ಕಲ್ಯಾಣ್ ಮಂಗಳವಾರ ಇಲ್ಲಿ ಎನ್ಡಿಎ ಮೈತ್ರಿಕೂಟದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಸೂಪರ್ ಸಿಕ್ಸ್, ಪಿ4 ಹೀಗೆ ಹಲವು ವಿಶೇಷ ಭರವಸೆಗಳನ್ನು ಪ್ರಣಾಳಿಕೆ ಒಳಗೊಂಡಿದೆ.ಸೂಪರ್ಸಿಕ್ಸ್:
ಇತರೆ ಭರವಸೆ:
ಬಡ ಕುಟುಂಬಗಳಿಗೆ 900 ಚದರ ಅಡಿ ಉಚಿತ ಭೂಮಿ, ಮನೆ ಕಟ್ಟಲು ಉಚಿತ ಮರಳು, ತಲ್ಲಿಕಿ ವಂಡನಮ್ ಯೋಜನೆಯಲ್ಲಿ ದಾಖಲಾದ ಶಾಲಾ ಮಕ್ಕಳಿಗೆ ವಾರ್ಷಿಕ 15 ಸಾವಿರ ರು., ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಮೀನುಗಾರರಿಗೆ 20 ಸಾವಿರ ರು. ಆರ್ಥಿಕ ನೆರವು, ಮನೆಗಳಿಗೆ ಉಚಿತ ನೀರು ಸಂಪರ್ಕ, ಉಚಿತ ಕುಡಿಯುವ ನೀರು ಪೂರೈಕೆ, ಉಳುವವರು ಹಾಗೂ ವಾಸಿಸುವವನೇ ಭೂಮಿಯ ಒಡೆಯ ಕಾಯ್ದೆ ರದ್ದು ಮಾಡುವ ಭರವಸೆ ನೀಡಲಾಗಿದೆ.ದೋಣಿ ರಿಪೇರಿಗೆ ಸಹಾಯಧನ, ಸಣ್ಣ ವ್ಯಾಪಾರಸ್ಥರಿಗೆ ಬಡ್ಡಿ ರಹಿತ ಸಾಲ, ಹಿಂದುಳಿದ ಜಾತಿಗಳ ರಕ್ಷಣೆಗೆ ವಿಶೇಷ ಕಾಯ್ದೆ, ಪೊಲ್ಲಾವರಂ ಯೋಜನೆ ಪೂರ್ಣ, ಎಲ್ಲಾ ಕುಟುಂಬಗಳಿಗೆ 25 ಲಕ್ಷ ರು. ಆರೋಗ್ಯ ವಿಮೆ, ಅಪಘಾತದಲ್ಲಿ ಸಾವಿಗೆ 10 ಲಕ್ಷ ರು. ವಿಮೆ, ಸಹಜ ಸಾವಿಗೆ 5 ಲಕ್ಷ ರು., ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಡವರಿಗೆ ಉಚಿತ ಜನೆರಿಕ್ ಔಷಧ ವಿತರಣೆ, ರಾಜಧಾನಿಯಾಗಿ ಅಮರಾವತಿ ಅಭಿವೃದ್ಧಿಯ ಭರವಸೆ ನೀಡಲಾಗಿದೆ.