6 ರಾಜತಾಂತ್ರಿಕರ ಉಚ್ಚಾಟನೆ ಬೆನ್ನಲ್ಲೇ ಇತರ ಭಾರತೀಯ ರಾಜತಾಂತ್ರಿಕರ ಮೇಲೂ ನಿಗಾ: ಕೆನಡಾ ಸರ್ಕಾರ

KannadaprabhaNewsNetwork |  
Published : Oct 20, 2024, 01:56 AM ISTUpdated : Oct 20, 2024, 04:59 AM IST
ಕೆನಡಾ | Kannada Prabha

ಸಾರಾಂಶ

ಕೆನಡಾದಲ್ಲಿನ ಭಾರತೀಯ ರಾಯಭಾರಿ ಸೇರಿ 6 ರಾಜತಾಂತ್ರಿಕರ ಉಚ್ಚಾಟನೆ ಬೆನ್ನಲ್ಲೇ ವಿದೇಶಾಂಗ ಸಚಿವೆ ಮೆಲೆನಿಯಾ ಜಾಲಿ ಅವರು ‘ನಾವು ದೇಶದಲ್ಲಿನ ಮಿಕ್ಕ ಭಾರತೀಯ ರಾಯಭಾರಿ ಕಚೇರಿಗಳ ರಾಜತಾಂತ್ರಿಕರ ಮೇಲೂ ನಿಗಾವಹಿಸಿದ್ದೇವೆ’ ಎಂದು ಹೇಳಿದ್ದಾರೆ.

ಒಟ್ಟಾವಾ: ಕೆನಡಾದಲ್ಲಿನ ಭಾರತೀಯ ರಾಯಭಾರಿ ಸೇರಿ 6 ರಾಜತಾಂತ್ರಿಕರ ಉಚ್ಚಾಟನೆ ಬೆನ್ನಲ್ಲೇ ವಿದೇಶಾಂಗ ಸಚಿವೆ ಮೆಲೆನಿಯಾ ಜಾಲಿ ಅವರು ‘ನಾವು ದೇಶದಲ್ಲಿನ ಮಿಕ್ಕ ಭಾರತೀಯ ರಾಯಭಾರಿ ಕಚೇರಿಗಳ ರಾಜತಾಂತ್ರಿಕರ ಮೇಲೂ ನಿಗಾವಹಿಸಿದ್ದೇವೆ’ ಎಂದು ಹೇಳಿದ್ದಾರೆ.

ಮಾಂಟ್ರಿಯಲ್‌ನಲ್ಲಿ ಮಾತನಾಡಿದ ಜಾಲಿ,‘ ಟೊರಂಟೋ, ವ್ಯಾಂಕೋವರ್‌ ಮತ್ತು ಮಾಂಟ್ರಿಯಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ರಾಯಭಾರಿಗಳನ್ನು ನಾವು ಗಮನಿಸುತ್ತಿದ್ದೇವೆ. ಅವರ ಮೇಲೆ ನಿಗಾವಹಿಸಿದ್ದೇವೆ. ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುವ ಯಾವುದೇ ರಾಯಭಾರಿಗಳನ್ನು ಕೆನಡಾ ಸಹಿಸುವುದಿಲ್ಲ. ನಮ್ಮ ಇತಿಹಾಸದಲ್ಲಿ ಇಂತಹ ಅಂತಾರಾಷ್ಟ್ರೀಯ ದಮನವನ್ನು ನಾವು ಎಂದಿಗೂ ನೋಡಿಲ್ಲ, ಮತ್ತು ಅದಕ್ಕೆ ಕೆನಡಾದಲ್ಲಿ ಆಸ್ಪದ ಕೊಡುವುದಿಲ್ಲ’ ಎಂದು ಎಚ್ಚರಿಸಿದರು.

ಕೆನಡಾ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಇತ್ತೀಚೆಗೆ 6 ಭಾರತೀಯ ದೂತರನ್ನು ಕೆನಡಾ ಸರ್ಕಾರ ಉಚ್ಚಾಟಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶದ ಮೊದಲ ಗಣರಾಜ್ಯೋತ್ಸವ ಸಂಭ್ರಮಕ್ಕೆ ಆಗಿದ್ದ ವೆಚ್ಚ ಎಷ್ಟು ? ಕುತೂಹಲಕಾರಿ ಸಂಗತಿಯಿದು
ಇಂದು ‘ವಂದೇ..’ ಪರಿಕಲ್ಪನೆಯಲ್ಲಿ 77ನೇ ಗಣರಾಜ್ಯ ದಿನ