ಬಾಲರಾಮನ ಮೂರ್ತಿ ಭವ್ಯತೆಯಿಂದ ಕೂಡಿತ್ತು: ಅರುಣ್‌ ಪತ್ನಿ

KannadaprabhaNewsNetwork |  
Published : Apr 18, 2024, 02:25 AM ISTUpdated : Apr 18, 2024, 06:30 AM IST
ಅರುಣ್‌ | Kannada Prabha

ಸಾರಾಂಶ

ಬಾಲರಾಮ ಪ್ರತಿದಿನ ಬೇರೆ ಬೇರೆ ರೀತಿಯಲ್ಲಿ ಕಾಣುತ್ತಾನೆ. ಆದರೆ ರಾಮನವಮಿಯ ಈ ಶುಭದಿನದಂದು ಆತನ ಮೂರ್ತಿ ಭವ್ಯತೆಯಿಂದ ಕೂಡಿರುವಂತೆ ಭಾಸವಾಯಿತು ಎಂದು ಬಾಲರಾಮನ ಮೂರ್ತಿ ಕೆತ್ತಿರುವ ಮೈಸೂರಿನ ಅರುಣ್ ಯೋಗಿರಾಜ್‌ ಅವರ ಪತ್ನಿ ವಿಜೇತಾ ತಿಳಿಸಿದ್ದಾರೆ.

ಅಯೋಧ್ಯೆ: ಬಾಲರಾಮ ಪ್ರತಿದಿನ ಬೇರೆ ಬೇರೆ ರೀತಿಯಲ್ಲಿ ಕಾಣುತ್ತಾನೆ. ಆದರೆ ರಾಮನವಮಿಯ ಈ ಶುಭದಿನದಂದು ಆತನ ಮೂರ್ತಿ ಭವ್ಯತೆಯಿಂದ ಕೂಡಿರುವಂತೆ ಭಾಸವಾಯಿತು ಎಂದು ಬಾಲರಾಮನ ಮೂರ್ತಿ ಕೆತ್ತಿರುವ ಮೈಸೂರಿನ ಅರುಣ್ ಯೋಗಿರಾಜ್‌ ಅವರ ಪತ್ನಿ ವಿಜೇತಾ ತಿಳಿಸಿದ್ದಾರೆ.

ಈ ಬಗ್ಗೆ ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಜೇತಾ, ‘ಶತಮಾನಗಳಿಂದ ಕಂಡಿದ್ದ ಕನಸು ಈ ರಾಮನವಮಿಯಂದು ಸಾಕಾರವಾಗಿದೆ. ಬಾಲರಾಮನಿಗೆ ಸೂರ್ಯ ತಿಲಕ ಬೀಳುವ ಕೌತುಕವನ್ನು ಕಣ್ತುಂಬಿಕೊಂಡು ಧನ್ಯನಾಗಿದ್ದೇನೆ. ನನ್ನ ಪತಿಗೆ ಶ್ರೀರಾಮ ಹಾಗೂ ಹಿರಿಯರ ಆಶೀರ್ವಾದದಿಂದಲೇ ಸದಾ ಯಶಸ್ಸು ಲಭಿಸುತ್ತಿದೆ ಎಂದು ಭಾವಿಸಿದ್ದೇನೆ’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ