ಮೋದಿ ಲಸಿಕೆ ಕೊಡಿಸಿದ್ದಕ್ಕೆ ಭಾರತೀಯರು ಜೀವಂತ: ಫಡ್ನವೀಸ್‌

KannadaprabhaNewsNetwork |  
Published : Apr 28, 2024, 01:27 AM ISTUpdated : Apr 28, 2024, 04:59 AM IST
ದೇವೇಂದ್ರ ಪಡ್ನವಿಸ್‌ | Kannada Prabha

ಸಾರಾಂಶ

‘ಕೋವಿಡ್ ವ್ಯಾಧಿಯ ಸಮಯದಲ್ಲಿ ನರೇಂದ್ರ ಮೋದಿ ಅವರು ಲಸಿಕೆ ಕೊಡಿಸಿದ್ದಕ್ಕೆ ಇಂದು ಭಾರತೀಯರು ಜೀವಂತವಾಗಿದ್ದಾರೆ.

ಪುಣೆ: ‘ಕೋವಿಡ್ ವ್ಯಾಧಿಯ ಸಮಯದಲ್ಲಿ ನರೇಂದ್ರ ಮೋದಿ ಅವರು ಲಸಿಕೆ ಕೊಡಿಸಿದ್ದಕ್ಕೆ ಇಂದು ಭಾರತೀಯರು ಜೀವಂತವಾಗಿದ್ದಾರೆ. ಅವರಿಂದಲೇ ನಾವು ಬದುಕಿದ್ದೇವೆ . ಹಾಗಾಗಿ ಅವರಿಗೆ ಮತ ನೀಡಿ’ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಮನವಿ ಮಾಡಿದ್ದಾರೆ.

ಚುನಾವಣಾ ಪ್ರಚಾರ ನಡೆಸಿದ ಅವರು, ‘ ಕೊರೋನಾ ವೇಳೆ ಹಲವಾರು ಮಂದಿ ತಮ್ಮ ಆತ್ಮೀಯರನ್ನು , ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಯಾರೂ ಭಾರತದ ನೆರವಿಗೆ ಬಂದಿರಲಿಲ್ಲ. ಹೀಗಾಗಿ ದೇಶದಲ್ಲಿ 40- 50 ಕೋಟಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವ ಆತಂಕವಿತ್ತು’ ಎಂದರು.

‘ಈ ವೇಳೆ ಮೋದಿಯವರು ವಿಜ್ಞಾನಿಗಳ ಜೊತೆ ಸಂವಹನ ನಡೆಸಿ ಲಸಿಕೆ ಕಂಡು ಹಿಡಿಯುವುದಕ್ಕೆ ನೆರವಾಗಿದ್ದರು. ಅದರಿಂದಲೇ ಇಂದು ನಾವೆಲ್ಲರೂ ಬದುಕಿದ್ದೇವೆ. ಎಲ್ಲರೂ ಇಲ್ಲಿದ್ದೇವೆ. ಮೋದಿ ನಮಗೆ ಲಸಿಕೆ ನೀಡದಿದ್ದರೆ ನಾವು ಇಂದು ಈ ರ್‍ಯಾಲಿ ವೀಕ್ಷಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ’ ಎಂದರು.

ಇದೇ ಸಂರ್ದಭದಲ್ಲಿ ವಿದೇಶಗಳೊಂದಿಗೆ ಕೇಂದ್ರದ ವ್ಯಾಕ್ಸಿನ್ ಮೈತ್ರಿ ವಿಚಾರ ಪ್ರಸ್ತಾಪಿಸಿದ ಫಡ್ನವೀಸ್, ‘ಜಗತ್ತಿನ 100 ದೇಶಗಳು, ಮೋದಿ ನೀಡಿದ ಲಸಿಕೆಯಿಂದಾಗಿ ತಮ್ಮ ದೇಶದ ಜನರು ಉಳಿದಿದ್ದಾರೆಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ’ ಎಂದೂ ಫಡ್ನವೀಸ್‌ ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ