ರಾಮನ ಬಳಿಕ ಈಗ ಸೀತಾಮಂದಿರ ನಿರ್ಮಾಣ ಘೋಷಣೆ

KannadaprabhaNewsNetwork |  
Published : May 17, 2024, 01:36 AM ISTUpdated : May 17, 2024, 05:21 AM IST
ಅಮಿತ್‌ ಶಾ | Kannada Prabha

ಸಾರಾಂಶ

ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೆ ಆತನ ಜನ್ಮಸ್ಥಳ ಅಯೋಧ್ಯೆಯಲ್ಲಿ ಭವ್ಯ ಮಂದಿರದ ಭರವಸೆ ನೀಡಿ ಅದನ್ನು ಈಡೇರಿಸಿದ ಬಿಜೆಪಿ, ಇದೀಗ ರಾಮನ ಧರ್ಮಪತ್ನಿ ಸೀತೆಗೂ ಆಕೆಯ ಹುಟ್ಟೂರು, ಬಿಹಾರದ ಸೀತಾಮಢಿಯಲ್ಲಿ ಬೃಹತ್‌ ದೇಗುಲ ನಿರ್ಮಿಸುವುದಾಗಿ ಘೋಷಿಸಿದೆ.

ಸೀತಾಮಢಿ: ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೆ ಆತನ ಜನ್ಮಸ್ಥಳ ಅಯೋಧ್ಯೆಯಲ್ಲಿ ಭವ್ಯ ಮಂದಿರದ ಭರವಸೆ ನೀಡಿ ಅದನ್ನು ಈಡೇರಿಸಿದ ಬಿಜೆಪಿ, ಇದೀಗ ರಾಮನ ಧರ್ಮಪತ್ನಿ ಸೀತೆಗೂ ಆಕೆಯ ಹುಟ್ಟೂರು, ಬಿಹಾರದ ಸೀತಾಮಢಿಯಲ್ಲಿ ಬೃಹತ್‌ ದೇಗುಲ ನಿರ್ಮಿಸುವುದಾಗಿ ಘೋಷಿಸಿದೆ.

ಬುಧವಾರ ಇಲ್ಲಿ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅಮಿತ್‌ ಶಾ, ‘ಬಿಜೆಪಿ ಎಂದಿಗೂ ಪ್ರತಿಪಕ್ಷಗಳ ರೀತಿ ಮತಬ್ಯಾಂಕ್‌ ರಾಜಕಾರಣ ಮಾಡುವುದಿಲ್ಲ.

 ಅಯೋಧ್ಯೆಯ ರಾಮಮಂದಿರದ ರೀತಿ ಸೀತಾಮಢಿಯಲ್ಲೂ ಸೀತಾಮಂದಿರ ನಿರ್ಮಿಸಲಾಗುವುದು. ಇದು ಅಯೋಧ್ಯೆಯ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಬಹಿಷ್ಕರಿಸಿದವರಿಂದ ಸಾಧ್ಯವಿಲ್ಲ. ಕೇವಲ ರಾಮಮಂದಿರದ ಕನಸು ಸಾಕಾರ ಮಾಡಿದ ಬಿಜೆಪಿ ಮತ್ತು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ’ ಎಂದು ವಾಗ್ದಾನ ನೀಡಿದರು.

ಸೀತಾಮಢಿಯಲ್ಲಿ ಹಾಲಿ ಸೀತೆಗೆ ಒಂದು ಸಣ್ಣ ದೇಗುಲ ನಿರ್ಮಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ
ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ