ಹೈದರಾಬಾದ್: ತೆಲಂಗಾಣದ ಯೂಟ್ಯೂಬರ್ ಒಬ್ಬ ನವಿಲಿನ ಸಾಂಬಾರ್ ತಯಾರಿಸಿ ಅದರ ರೆಸಿಪಿ ಪ್ರದರ್ಶಿಸಿದ್ದಕ್ಕೆ ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.
ಈ ವೇಳೆ ಆತನ ಮನೆಯಲ್ಲಿ ಪತ್ತೆಯಾದ ಚಿಕನ್ ಕರಿಯನ್ನು ಕೂಡ ಪರಿಶೀಲನೆಗಾಗಿ ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿದೆ.
ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿ ದನಿ ಎತ್ತಿದ ಕಾರಣ ಆ ವಿಡಿಯೋವನ್ನು ತೆಗೆದುಹಾಕಲಾಗಿದೆ.ಕಾನೂನಿನ ಪ್ರಕಾರ ರಾಷ್ಟ್ರಪಕ್ಷಿಯಾದ ನವಿಲನ್ನು ಸಾಕುವುದು ಹಾಗೂ ಹಿಡಿಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಮೊದಲು ಕೂಡ ಕುಮಾರ್ ಕಾಡು ಹಂದಿಯ ಪದಾರ್ಥ ತಯಾರಿಸಿದ್ದ.