ದಿಲ್ಲಿಗೆ ಹೋಗುವೆ ಎಂದು ಪಾಕ್‌ಗೆ ಹೋಗ್ತಿದ್ದ ಜ್ಯೋತಿ!

KannadaprabhaNewsNetwork |  
Published : May 21, 2025, 02:25 AM IST
ಜ್ಯೋತಿ  | Kannada Prabha

ಸಾರಾಂಶ

ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸುಳ್ಳಿನ ಮತ್ತೊಂದು ಕಥೆ ಬಿಚ್ಚಿಕೊಂಡಿದೆ. ಆಕೆಯ ಹೆತ್ತವರಿಗೆ ದೆಹಲಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ಪಾಕಿಸ್ತಾನಕ್ಕೆ ತೆರಳಿದ್ದಾಳೆ ಎನ್ನುವುದು ಬಯಲಾಗಿದೆ.

- ಪಾಕ್‌ ಗೂಢಚಾರಿಣಿಯ ಮತ್ತಷ್ಟು ರಹಸ್ಯ ಬಯಲು

- ತಂದೆಯಿಂದಲೇ ಮಗಳ ಸುಳ್ಳು ಬಹಿರಂಗ

ಚಂಡೀಗಢ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸುಳ್ಳಿನ ಮತ್ತೊಂದು ಕಥೆ ಬಿಚ್ಚಿಕೊಂಡಿದೆ. ಆಕೆಯ ಹೆತ್ತವರಿಗೆ ದೆಹಲಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ಪಾಕಿಸ್ತಾನಕ್ಕೆ ತೆರಳಿದ್ದಾಳೆ ಎನ್ನುವುದು ಬಯಲಾಗಿದೆ.

ಈ ಬಗ್ಗೆ ಆಕೆಯ ತಂದೆ ಹರೀಶ್ ಮಲ್ಹೋತ್ರಾ ಮಾಧ್ಯಮಗಳಲ್ಲಿ ಮಾತನಾಡಿದ್ದು, ‘ ಅವಳು ದೆಹಲಿಗೆ ಹೋಗುವುದಾಗಿ ಹೇಳಿ ಹೋಗುತ್ತಿದ್ದಳು. ಅವಳು ನನಗೆ ಏನನ್ನೂ ಹೇಳಿರಲಿಲ್ಲ. ಕೋವಿಡ್‌ಗೂ ಮುನ್ನ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಬಳಿಕ ಅವಳು ಅಲ್ಲಿ ಕೆಲಸ ಬಿಟ್ಟಿದ್ದಳು. ಆಕೆಯ ಯೂಟ್ಯೂಬ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ನನಗೆ ತಿಳಿದಿಲ್ಲ, ಅವಳು ಮನೆಯಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದಳು’ ಎಂದಿದ್ದಾರೆ. ಈ ಮೂಲಕ ದಿಲ್ಲಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಆಕೆ ಪಾಕಿಸ್ತಾನಿಗಳ ಸಂಗ ನಡೆಸುತ್ತಿರುವುದು ಈಗ ಬಯಲಾಗಿದೆ.

ಸತತ ವಿಚಾರಣೆ:

ಈ ನಡುವೆ, ಜ್ಯೋತಿ ಮಲ್ಹೋತ್ರಾಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಬ್ಯೂರೋ ಮತ್ತು ಮಿಲಿಟರಿ ಗುಪ್ತಚರ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆಕೆಯ ಹಣಕಾಸು ವಹಿವಾಟುಗಳು ಮತ್ತು ಪ್ರಯಾಣದ ವಿವರಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ