ಧರಣಿ: ಶಾಸಕರ ಸಂಧಾನ ಸಭೆ ವಿಫಲ

KannadaprabhaNewsNetwork |  
Published : Nov 05, 2025, 01:15 AM IST
ನಿಮ್ಮ ಜೊತೆ ನಾವಿದ್ದೇವೆ  ನಾವು ಹೋರಾಟ ಮುಂದುವರೆಸೋಣ ಅಷ್ಟರೊಳಗೆ ನಮ್ಮ ಬೇಡಿಕೆ ಈಡೇರಿದರೆ ಧರಣಿ ಅಂತ್ಯಗೊಳಿಸೋಣ ಎಂದು ಸಂಘ ಸಂಸ್ಥೆಗಳು ತಿಳಿಸಿದರು. | Kannada Prabha

ಸಾರಾಂಶ

ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ರಾಜ್ಯ ರೈತಸಂಘ ಸಂತೆ ಸ್ಥಳಾಂತರ, ಮೂಲಸೌಕರ್ಯ ಕಸ ವಿಲೇವಾರಿ ಘಟಕಕ್ಕೆ ಜಾಗದ ಅನುಮೋದನೆಗಾಗಿ ಕಳೆದ 26 ದಿನಗಳಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಸುರೇಶಬಾಬು ಭೇಟಿ ನೀಡಿ ಸಂಧಾನ ನಡೆಸುವ ಪ್ರಯತ್ನ ಮಾಡಿದರು.

ಕನ್ನಡಪ್ರಭ ವಾರ್ತೆ ಹುಳಿಯಾರು

ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ರಾಜ್ಯ ರೈತಸಂಘ ಸಂತೆ ಸ್ಥಳಾಂತರ, ಮೂಲಸೌಕರ್ಯ ಕಸ ವಿಲೇವಾರಿ ಘಟಕಕ್ಕೆ ಜಾಗದ ಅನುಮೋದನೆಗಾಗಿ ಕಳೆದ 26 ದಿನಗಳಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಸುರೇಶಬಾಬು ಭೇಟಿ ನೀಡಿ ಸಂಧಾನ ನಡೆಸುವ ಪ್ರಯತ್ನ ಮಾಡಿದರು.

ಸೋಮವಾರ ತಡ ರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಶೌಚಾಲಯ ನಿರ್ವಹಣೆ, ಸಂತೆ ಸ್ಥಳಾಂತರ ಹಾಗೂ ಕಸ ವಿಲೇವಾರಿ ಘಟಕ ನಿರ್ಮಾಣದ ಮೂರು ಬೇಡಿಕೆಗಳ ಬಗ್ಗೆ ಆಗಿರುವ ಪ್ರಗತಿ ಹಾಗೂ ಇನ್ನು 10 ದಿನಗಳ ಒಳಗೆ ಕಸ ವಿಲೆವಾರಿ ಘಟಕದ ಕುರಿತು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಆರ್ ಟಿ ಸಿ ಯಲ್ಲಿ ನಮೂದಿಸುವುದಾಗಿ ತಿಳಿಸಿದರು. ಇನ್ನು ಆರು ತಿಂಗಳ ಒಳಗೆ ಕಸ ವಿಲೇವಾರಿ ಘಟಕ ಕಾರ್ಯ ಆರಂಭ ಮಾಡಿಸುವ ಭರವಸೆ ನೀಡಿ ಧರಣಿ ಅಂತ್ಯಗೊಳಿಸಲು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಯಿಸಿದ ಚಂದ್ರಶೇಖರ್‌ ನಾನು ತಕ್ಷಣವೇ ನಿರ್ಧಾರ ಮಾಡುವುದಿಲ್ಲ ಎಲ್ಲಾ ಸಂಘಟನೆಗಳ ಜೊತೆ ಚರ್ಚೆ ನಡೆಸಿ ನಂತರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು. ಮಂಗಳವಾರ ನಡೆದ ಮುಖಂಡರು ಸಭೆಯಲ್ಲಿ ಇನ್ನೂ 10 ದಿನ ಧರಣಿ ಮುಂದುವರೆಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ